ಹನುಮಂತನ ಕೃಪೆ ಪಡೆಯಲು ಕೆಲವರು ಪ್ರತಿದಿನ ಹನುಮ ಚಾಲೀಸ್ ಅನ್ನು ಓದುತ್ತಾರೆ. ಇದನ್ನು ಹೆಚ್ಚಾಗಿ ಮಂಗಳವಾರ ಅಥವಾ ಶನಿವಾರದಂದು ನಿಯಮಗಳ ಪ್ರಕಾರ ಪಠಿಸಬೇಕು. ಇದರಿಂದ ನೀವು ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಹಾಗಾಗಿ ನೀವು ಹನುಮ ಚಾಲೀಸ್ ಓದುವಾಗ ಈ ನಿಯಮ ಪಾಲಿಸಿ.
-ಹನುಮ ಚಾಲೀಸ್ ಪಠಿಸುವ ಮುನ್ನ ಶ್ರೀರಾಮ ಹೆಸರನ್ನು ಜಪಿಸಿ. ನಂತರ ಹನುಮ ಚಾಲೀಸ್ ಅನ್ನು ಓದಿ. ಇದರಿಂದ ಹನುಮಂತನು ಪ್ರಸನ್ನನಾಗುತ್ತಾನೆ.
-ಹನುಮ ಚಾಲೀಸ್ ಅನ್ನು ಯಾವತ್ತೂ ಗಟ್ಟಿಯಾಗಿ ಪಠಿಸಬಾರದು. ಅದನ್ನು ಮನಸ್ಸಿನಲ್ಲಿಯೇ ಓದಬೇಕು ಮತ್ತು ನಿಧಾನವಾಗಿ ಯಾವುದೇ ತಪ್ಪಿಲ್ಲದೇ ಓದಬೇಕು.
ಆರತಿ ಮಾಡುವಾಗ ಈ ವಿಧಾನ ಪಾಲಿಸಿ….!
-ಹಾಗೇ ಹನುಮ ಚಾಲೀಸ್ ಓದುವಾಗ ಶಾಂತವಾದ ಪ್ರದೇಶದಲ್ಲಿ ಕುಳಿತು ಓದಬೇಕು.
-ಹಾಗೇ ಹನುಮ ಚಾಲೀಸ್ ಪಠಿಸುವ ಮುನ್ನ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ. ನೀವು ಕುಳಿತುಕೊಳ್ಳುವ ಆಸನದ ಮೇಲೆ ಕೆಂಪು ಬಟ್ಟೆ ಹಾಕಿದರೆ ಒಳ್ಳೆಯದು.