ವಾಸ್ತು ಶಾಸ್ತ್ರದಲ್ಲಿ ಹನುಮಂತನ ವಿಗ್ರಹ ಅಥವಾ ಫೋಟೊವನ್ನು ಮನೆಯಲ್ಲಿ ಇರಿಸಲು ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆಯ ಹಲವು ವಾಸ್ತುದೋಷಗಳನ್ನು ಕೇವಲ ಹನುಮಂತನ ಫೋಟೊವನ್ನು ಸ್ಥಾಪಿಸುವ ಮೂಲಕ ತೆಗೆದುಹಾಕಬಹುದು. ಹಾಗಾಗಿ ವಾಸ್ತು ಪ್ರಕಾರ ಹನುಮಂತನ ಪೋಟೊವನ್ನು ಇಟ್ಟು ಅವರ ಅನುಗ್ರಹ ಪಡೆಯಿರಿ.
-ಕುಟುಂಬದಲ್ಲಿ ಪ್ರೀತಿಯನ್ನು ಹೆಚ್ಚಿಸಲು , ಭಿನ್ನಾಭಿಪ್ರಾಯ, ಅತೃಷ್ತಿ, ದ್ವೇಷದ ಭಾವನೆ ಇದ್ದರೆ ಅದನ್ನು ನಿವಾರಿಸಲು ರಾಮನ ಪಾದದಡಿ ಕುಳಿತ ಹನುಮಂತನ ಪೋಟೊವನ್ನು ಸ್ಥಾಪಿಸಿ.
-ಕಷ್ಟಕರವಾದ ಸನ್ನಿವೇಶಗಳನ್ನು ಎದುರಿಸಲು, ಪರೀಕ್ಷೆ, ಸಂದರ್ಶನ ದಿನದಂದು ನಿಮಗೆ ಭಯವಾಗುತ್ತಿದ್ದರೆ ಅದನ್ನು ನಿವಾರಿಸಲು ಪರ್ವತವನ್ನು ಎತ್ತುವಂತಹ ಹನುಮಂತನ ಫೋಟೊವನ್ನು ಮನೆಯಲ್ಲಿ ಸ್ಥಾಪಿಸಿ.
-ಯಾವುದೇ ನಿರ್ದಿಷ್ಟ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ ನೀವು ಲಂಕೆಯನ್ನು ಸುಡುವಂತಹ ಹನುಮಂತನ ಚಿತ್ರವನ್ನು ಹಾಕಬೇಕು.
– ಕಷ್ಟಕರವಾದ , ನಿಮ್ಮ ಸಾಮಾರ್ಥ್ಯಕ್ಕೂ ಮೀರಿದ ಕೆಲಸಗಳನ್ನು ಮಾಡುವಾಗ ಯಶಸ್ಸನ್ನು ಸಾಧಿಸಲು ರಾಮ ಲಕ್ಷ್ಮಣರನ್ನು ಭುಜದ ಮೇಲೆ ಹೊತ್ತು ಸಾಗುವ ಪೋಟೊ ಅಥವಾ ಹನುಮಂತ ಆಕಾಶದಲ್ಲಿ ಹಾರುವ ಫೋಟೊವನ್ನು ಹಾಕಬೇಕು.
ಈ ರಾಶಿಯವರು ಮೊದಲು ಭೇಟಿಯಲ್ಲೇ ಬೇರೆಯವರನ್ನು ಆಕರ್ಷಿಸುತ್ತಾರೆ….!
-ನಿಮ್ಮ ಕುಟುಂಬದಲ್ಲಿ ತೊಂದರೆಯಾಗುತ್ತಿದ್ದರೆ ನಕರಾತ್ಮಕ ಶಕ್ತಿಯನ್ನು ಮನೆಯಿಂದ ಓಡಿಸಲು ಹನುಮಂತನ ಫೋಟೊವನ್ನು ಮುಖ್ಯದ್ವಾರದಲ್ಲಿ ಹಾಕಿ. ಇದರಿಂದ ಕೆಟ್ಟ ಶಕ್ತಿ ಮನೆಗೆ ಬರುವುದಿಲ್ಲ.
-ಮನೆಯಲ್ಲಿ ನೀರಿನ ಮೂಲ ತಪ್ಪುದಿಕ್ಕಿನಲ್ಲಿದ್ದರೆ ಅದರಿಂದ ಉಂಟಾಗುವ ದೋಷವನ್ನು ನಿವಾರಿಸಲು ಪಂಚಮುಖಿ ಹನುಮಂತನ ಫೋಟೊವನ್ನು ನೀರಿನ ಮೂಲದ ಎದುರು ಹಾಕಬೇಕು.
-ಹಾಗೇ ಹನುಮಂತನ ಪೋಟೊವನ್ನು ಮೆಟ್ಟಿಲುಗಳ ಕೆಳಗೆ, ಅಡುಗೆ ಮನೆಯಲ್ಲಿ, ಮಲಗುವ ಕೋಣೆ, ಅಪ