Kannada Duniya

ಸೋಮವಾರ ದೇವರ ಆಶೀರ್ವಾದ ಪಡೆಯಲು ಈ ಕೆಲಸ ಮಾಡಿ….!

ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದನ್ನು ನಿವಾರಿಸಲೆಂದು ನಾವು ದೇವರ ಮೋರೆ ಹೋಗುತ್ತೇವೆ. ಅದರಲ್ಲೂ ಶಿವ, ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಶಿವ ಪೂಜೆಗೆ ಸೂಕ್ತವಾದ ದಿನ ಸೋಮವಾರದಂದು ಶಿವನನ್ನು ಈ ರೀತಿಯಲ್ಲಿ ಪೂಜಿಸಿ.

-ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೋಮವಾರ ಉತ್ತರಕ್ಕೆ ಎದುರಾಗಿ ಪೂಜಿಸುವುದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾರು ‘ಓಂ ನಮಃ ಶಿವಾಯ ‘ ಮಂತ್ರವನ್ನು ಉತ್ತರದಿಕ್ಕಿಗೆ ಮುಖ ಮಾಡಿ 11, 21, 108 ಬಾರಿ ಪಠಿಸಿದರೆ ಶಿವನ ಅನುಗ್ರಹ ದೊರೆಯುತ್ತದೆ.

-ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಸೋಮವಾರ ಶಿವನನ್ನು ಪೂಜಿಸಬೇಕು. ಆ ದಿನ ಹಾಲಿಗೆ ಸಕ್ಕರೆ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಇದು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ.

-ಸೋಮವಾರ ಪಂಚಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ನೀರು)ದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ನಿಮ್ಮ ರೋಗರುಜಿನಗಳು ನಿರ್ಮೂಲನೆಯಾಗುತ್ತವೆ.

 ಪ್ರತಿದಿನ ಈ ಕೆಲಸಗಳನ್ನು ಮಾಡುವುದರಿಂದ ಅದೃಷ್ಟ ಹೊಳೆಯುತ್ತದೆ, ಹಣದ ಕೊರತೆ ಇರುವುದಿಲ್ಲವಂತೆ….!

-ಸೋಮವಾರದಂದು ಶಿವನನ್ನು ಪೂಜಿಸಿ ಶಿವ ತಾಂಡವ್ ಸ್ತೋತ್ರವನ್ನು ಪಠಿಸುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು.

-ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ, ಸೋಮವಾರದಂದು ಚಂದ್ರಶೇಖರ ಸ್ತೋತ್ರವನ್ನು ಪಠಿಸುವುದರಿಂದ ನಿಮ್ಮ ಜಾತಕದಲ್ಲಿ ಚಂದ್ರನ ಸ್ಥಾನ ಬಲವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...