ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದನ್ನು ನಿವಾರಿಸಲೆಂದು ನಾವು ದೇವರ ಮೋರೆ ಹೋಗುತ್ತೇವೆ. ಅದರಲ್ಲೂ ಶಿವ, ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಶಿವ ಪೂಜೆಗೆ ಸೂಕ್ತವಾದ ದಿನ ಸೋಮವಾರದಂದು ಶಿವನನ್ನು ಈ ರೀತಿಯಲ್ಲಿ ಪೂಜಿಸಿ.
-ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೋಮವಾರ ಉತ್ತರಕ್ಕೆ ಎದುರಾಗಿ ಪೂಜಿಸುವುದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾರು ‘ಓಂ ನಮಃ ಶಿವಾಯ ‘ ಮಂತ್ರವನ್ನು ಉತ್ತರದಿಕ್ಕಿಗೆ ಮುಖ ಮಾಡಿ 11, 21, 108 ಬಾರಿ ಪಠಿಸಿದರೆ ಶಿವನ ಅನುಗ್ರಹ ದೊರೆಯುತ್ತದೆ.
-ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಸೋಮವಾರ ಶಿವನನ್ನು ಪೂಜಿಸಬೇಕು. ಆ ದಿನ ಹಾಲಿಗೆ ಸಕ್ಕರೆ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಇದು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ.
-ಸೋಮವಾರ ಪಂಚಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ನೀರು)ದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ನಿಮ್ಮ ರೋಗರುಜಿನಗಳು ನಿರ್ಮೂಲನೆಯಾಗುತ್ತವೆ.
ಪ್ರತಿದಿನ ಈ ಕೆಲಸಗಳನ್ನು ಮಾಡುವುದರಿಂದ ಅದೃಷ್ಟ ಹೊಳೆಯುತ್ತದೆ, ಹಣದ ಕೊರತೆ ಇರುವುದಿಲ್ಲವಂತೆ….!
-ಸೋಮವಾರದಂದು ಶಿವನನ್ನು ಪೂಜಿಸಿ ಶಿವ ತಾಂಡವ್ ಸ್ತೋತ್ರವನ್ನು ಪಠಿಸುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು.
-ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ, ಸೋಮವಾರದಂದು ಚಂದ್ರಶೇಖರ ಸ್ತೋತ್ರವನ್ನು ಪಠಿಸುವುದರಿಂದ ನಿಮ್ಮ ಜಾತಕದಲ್ಲಿ ಚಂದ್ರನ ಸ್ಥಾನ ಬಲವಾಗುತ್ತದೆ.