Kannada Duniya

ಯಶಸ್ಸು ಪಡೆಯಲು ಸೋಮವಾರ ಈ ವಿಶೇಷ ತಂತ್ರವನ್ನು ಮಾಡಿ….!

ಸೋಮವಾರ ಶಿವನ ಆರಾಧನೆಗೆ ಬಹಳ ವಿಶೇಷವಾದ ದಿನ. ಶಿವನಿಗೆ ಈ ದಿನ ಬಹಳ ಪ್ರಿಯ. ಶಿವನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಹಾಗಾಗಿ ಸೋಮವಾರದಂದು ಕೆಲವು ಪರಿಹಾರಗಳನ್ನು ಮಾಡಿದರೆ ಶಿವನ ಅನುಗ್ರಹದಿಂದ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು.

ಸೋಮವಾರ ನಂದಿಗೆ ಹಸಿರು ಹುಲ್ಲನ್ನು ತಿನ್ನಿಸಿ. ಇದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.

ಸೋಮವಾರ ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ. ಶಿವನಿಗೆ ರುದ್ರಾಭಿಷೇಕ ಮಾಡಿ. ಇದರಿಂದ ಶಿವನ ಅನುಗ್ರಹ ದೊರೆಯುತ್ತದೆ.

ಸೋಮವಾರ ಶಿವನಿಗೆ ಎಳ್ಳು ಮತ್ತು ಬಾರ್ಲಿಯನ್ನು ಅರ್ಪಿಸಿ. ಇದು ಪಾಪಗಳಿಂದ ಮುಕ್ತಿಯನ್ನು ನೀಡುತ್ತದೆ. ಜೊತೆಗೆ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.

ಮಕ್ಕಳನ್ನು ಪಡೆಯಲು ಸೋಮವಾರದಂದು ಹಿಟ್ಟಿನಿಂದ 11 ಶಿವಲಿಂಗ ಮಾಡಿ 11 ಬಾರಿ ಅಭಿಷೇಕ ಮಾಡಿ. ಇದರಿಂದ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ.

ಲಾಲ್ ಕಿತಾಬ್ ನಲ್ಲಿ ತಿಳಿಸಿದ ಈ ತಂತ್ರಗಳಿಂದ ನಿಮಗೆ ನಿದ್ರೆ ಚೆನ್ನಾಗಿ ಬರುತ್ತದೆ, ಬಡತನ ದೂರವಾಗುತ್ತದೆ

ಸೋಮವಾರ ಬಡವರಿಗೆ ಅನ್ನದಾನ ಮಾಡಿ. ಹಾಗೇ ಸೋಮವಾರ 21 ಬಿಲ್ವಪತ್ರೆಯಲ್ಲಿ ಓಂನಮಃ ಶಿವಾಯ ಎಂದು ಬರೆದು ಶಿವನಿಗೆ ಅರ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...