Kannada Duniya

ಸರಸ್ವತಿಯ ಅನುಗ್ರಹ ದೊರೆಯಲು ವಸಂತ ಪಂಚಮಿ ದಿನ ಈ ಪರಿಹಾರ ಮಾಡಿ

ಹಿಂದೂ ಕ್ಯಾಲೆಂಡರ್ ನಲ್ಲಿ ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ವಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ವಿದ್ಯಾದೇವಿ ಸರಸ್ವತಿ ದೇವಿ ಜನಿಸಿದಳು ಎಂದು ಹೇಳಲಾಗುತ್ತದೆ. ಹಾಗಾಗಿ ವಸಂತ ಪಂಚಮಿ ಈ ವರ್ಷ ಫೆಬ್ರವರಿ 14ರಂದು ಬಂದಿದೆ. ಹಾಗಾಗಿ ನಿಮಗೆ ವಿದ್ಯೆ ದೇವಿಯ ಅನುಗ್ರಹ ಸಿಗಲು ಈ ದಿನ ಈ ಪರಿಹಾರಗಳನ್ನು ಮಾಡಿ.

ಈ ದಿನ ಸರಸ್ವತಿ ದೇವಿಗೆ ಕಡಲೆ ಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ. ಇದರಿಂದ ದೇವಿ ಸಂತೋಷಗೊಂಡು ನಿಮಗೆ ವಿದ್ಯೆಯಲ್ಲಿರುವ ದೋಷವನ್ನು ನಿವಾರಿಸುತ್ತಾಳೆ.
ಈ ದಿನ ಸರಸ್ವತಿ ದೇವಿಗೆ ಹಳದಿ ಬಣ್ಣದ ಅಕ್ಕಿಯಿಂದ ಸಿಹಿ ಅನ್ನವನ್ನು ತಯಾರಿಸಿ ಅರ್ಪಿಸಿ. ಇದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆಯಂತೆ.

ಹಾಗೇ ನಿಮಗೆ ಶಿಕ್ಷಣದಲ್ಲಿರುವ ಸಮಸ್ಯೆಯನ್ನು ನಿವಾರಿಸಲು ನೀವು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು ಸರಸ್ವತಿಗೆ ದೇವಿಗೆ ವಸಂತ ಪಂಚಮಿಯ ದಿನ ಬಿಳಿ ಬಣ್ಣದ ವಸ್ತ್ರ, ಬಿಳಿ ಬಣ್ಣದ ಹೂಗಳನ್ನು ಅರ್ಪಿಸಿ. ಮತ್ತು ಈ ದಿನ ಬಡ ಮಕ್ಕಳಿಗೆ ಪುಸ್ತಕಗಳನ್ನು ದಾನ ಮಾಡಿ. ಇದರಿಂದ ಸರಸ್ವತಿಯ ದೇವಿಯ ಅನುಗ್ರಹ ದೊರೆತು ವಿದ್ಯೆಯಲ್ಲಿ ಉನ್ನತ ಮಟ್ಟಕ್ಕೆ ಏರುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...