Kannada Duniya

ಶಿವನ ಅನುಗ್ರಹ ಪಡೆಯಲು ಶಿವನಿಗೆ ಈ ಧಾನ್ಯಗಳನ್ನು ಅರ್ಪಿಸಿ….!

ಶಿವನು ಭಕ್ತರಿಗೆ ಪ್ರಿಯವಾದವನು. ಯಾಕೆಂದರೆ ಶಿವ, ಭಕ್ತರು ಕೇಳಿದ್ದನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ನಿಮಗೆ ಶಿವನ ಅನುಗ್ರಹ ಪಡೆಯಲು ನೀವು ಶಿವನಿಗೆ ಈ ಧಾನ್ಯವನ್ನು ಅರ್ಪಿಸಿ.

ಒಂದು ಹಿಡಿ ತೊಗರಿಬೇಳೆಯನ್ನು ಶಿವಲಿಂಗಕ್ಕೆ ಅರ್ಪಿಸಿ. ಇದನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ನೆಲೆಸುತ್ತದೆಯಂತೆ. ನೋವು, ದುಃಖ ನಿವಾರಣೆಯಾಗುತ್ತದೆಯಂತೆ.

ಶಿವನಿಗೆ ಅಕ್ಕಿಯನ್ನು ಅಕ್ಷತೆ ರೂಪದಲ್ಲಿ ಅರ್ಪಿಸಿ. ಇದರಿಂದ ಜೀವನದ ಪ್ರತಿಯೊಂದು ಸಮಸ್ಯೆ ನಿವಾರಣೆಯಾಗುತ್ತದೆ.

ಈ ವಸ್ತುಗಳನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತಿನ ದೇವತೆಗಳು ಕೋಪಗೊಳ್ಳುತ್ತಾರಂತೆ….!

ಶಿವಲಿಂಗಕ್ಕೆ ಗೋಧಿಯನ್ನು ಅರ್ಪಿಸಿ. ಇದರಿಂದ ಮದುವೆಗೆ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತದೆ.

ಹಾಗೇ ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಿದರೆ ನಿಮಗೆ ಶುಭ ಫಲಿತಾಂಶಗಳು ಸಿಗುತ್ತದೆಯಂತೆ. ನಿಮ್ಮ ಮಾನಸಿಕ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...