ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಗಸ್ಟ್ 18ರಂದು ಮಂಗಳನು ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. ಹಾಗಾಗಿ ಕೆಲವು ರಾಶಿಯವರಿಗೆ ಇದರಿಂದ ಒಳ್ಳೆಯದಾದರೆ ಕೆಲವು ರಾಶಿಯವರಿಗೆ ಕೆಟ್ಟದಾಗಲಿದೆಯಂತೆ. ಹಾಗಾದ್ರೆ ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು ಎಂಬುದನ್ನು ತಿಳಿಯಿರಿ.
ವೃಷಭ ರಾಶಿ : ನೀವು ಹಣದ ನಷ್ಟವನ್ನು ಅನುಭವಿಸುತ್ತೀರಿ. ನಿಮ್ಮ ಪ್ರೇಮ ಜೀವನದಲ್ಲಿ ಸಮಸ್ಯೆ ಎದುರಾಗಲಿದೆ. ಹಾಗೇ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ.
ಸಿಂಹ ರಾಶಿ : ನೀವು ನಿಮ್ಮ ಮಾತಿನ ಮೇಲೆ ನಿಯಂತ್ರಣವನ್ನಿಟ್ಟುಕೊಳ್ಳಿ. ವ್ಯರ್ಥವಾಗಿ ಟೀಕಿಸುವುದನ್ನು ತಪ್ಪಿಸಿ. ಇದರಿಂದ ಕುಟುಂಬದಲ್ಲಿ ಚರ್ಚೆ ನಡೆಯಬಹುದು. ನಿಮ್ಮ ಸಂಬಂಧ ಕೆಡಬಹುದು.
ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ ಸಂಪತ್ತು ಬರುತ್ತದೆ…!
ಕನ್ಯಾರಾಶಿ : ನೀವು ಕೆಲವು ತೊಂದರೆಗಳನ್ನು ಎದುರಿಸುತ್ತೀರಿ. ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ.
ಕುಂಭ ರಾಶಿ : ನೀವು ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತೀರಿ. ಆಸ್ತಿಯ ವಿಚಾರದಲ್ಲಿ ಒಡಹುಟ್ಟಿದವರ ಜೊತೆ ಜಗಳವಾಗಬಹುದು. ಕಹಿ ಮಾತುಗಳಿಂದ ಬೇರೆಯವರನ್ನು ನೋಯಿಸಬೇಡಿ.