ಭಾನುವಾರದ ದಿನವನ್ನು ಸೂರ್ಯದೇವನ ಪೂಜೆಗೆ ಮೀಸಲಿಡಲಾಗಿದೆ. ಹಾಗಾಗಿ ಈ ದಿನ ಸೂರ್ಯದೇವನನ್ನು ಪೂಜಿಸುವುದರಿಂದ ನಮ್ಮ ಜೀವನದ ಹಲವಾರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಂತೆ. ಆದರೆ ಸೂರ್ಯನನ್ನು ಸರಿಯಾದ ಸಮಯದಲ್ಲಿ ಪೂಜಿಸಿ.
ಗ್ರಹಗಳಲ್ಲಿ ಮುಖ್ಯವಾದ ಗ್ರಹ ಸೂರ್ಯ. ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಹಾಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯನ್ನು ಪೂಜಿಸುವುದರಿಂದ ನಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ. ಅಲ್ಲದೇ ಇತರ ಗ್ರಹಗಳ ದೋಷವನ್ನು ಕಡಿಮೆ ಮಾಡಬಹುದಂತೆ. ಅಲ್ಲದೇ ಸೂರ್ಯ ತಂದೆಯನ್ನು ಪ್ರತಿನಿಧಿಸುವುದರಿಂದ ಸೂರ್ಯದೇವನನ್ನು ಪೂಜಿಸುವುದರಿಂದ ತಂದೆಯೊಂದಿಗಿನ ನಿಮ್ಮ ಸಂಬಂಧ ಬಲಪಡುತ್ತದೆಯಂತೆ.
ಹಾಗಾಗಿ ಸೂರ್ಯದೇವನನ್ನು ಪ್ರತಿದಿನ ಭಾನುವಾರದಂದು ತಪ್ಪದೇ ಪೂಜಿಸಿ. ಅದರಲ್ಲೂ ಸೂರ್ಯೋದಯವಾದ ಒಂದು ಗಂಟೆಯೊಳಗೆ ಪೂಜಿಸಿದರೆ ಒಳ್ಳೆಯದಂತೆ. ಯಾಕಂದರೆ ಈ ಸಮಯದಲ್ಲಿ ಸೂರ್ಯನ ಶಕ್ತಿ ಅಧಿಕವಾಗಿರುವ ಕಾರಣ ಯಾವುದೇ ಸಮಸ್ಯೆಗಳನ್ನು ಪರಿಹರಿಸುತ್ತಾನಂತೆ.