ಹಿಂದೂಧರ್ಮದಲ್ಲಿ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಅದರಂತೆ ಬುಧವಾರದಂದು ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನನ್ನು ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಹಾಗಾಗಿ ಬುಧವಾರದಂದು ಗಣೇಶನಗೆ ಇದನ್ನು ಅರ್ಪಿಸಿದರೆ ನಿಮ್ಮ ಸಮಸ್ಯೆಗಳು ದೂರವಾಗುತ್ತದೆಯಂತೆ.
ಬುಧವಾರದಂದು ಗಣೇಶನನ್ನು ಪೂಜಿಸಿ ಗಣೇಶ ಸ್ತೋತ್ರನ್ನು ಪಠಿಸಿ. ಇದರಿಂದ ನಿಮ್ಮ ಕಾರ್ಯದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತದೆಯಂತೆ. ಗಣೇಶನ ಕೃಪೆಯಿಂದ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತದೆ.
ಬುಧವಾರದಂದು ಮಕ್ಕಳ ಕೈಯಿಂದ ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ. ಇದರಿಂದ ಅವರು ಓದಿನ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆಯಂತೆ.
ನಿಮ್ಮ ಮಗು ಸರಿಯಾಗಿ ಕಲಿಯದಿದ್ದರೆ ಈ ಕ್ರಮಗಳನ್ನು ಪಾಲಿಸಿ….!
ಹಾಗೇ ನಿಮ್ಮ ಮನೆಯಲ್ಲಿ ರೋಗಿಗಳಿದ್ದರೆ ಬುಧವಾರದಂದು ಗಣೇಶನಿಗೆ ಸಿಂಧೂರವನ್ನು ಅರ್ಪಿಸಿ ಅದನ್ನು ರೋಗಿಗಳ ಹಣೆಗೆ ಹಚ್ಚಿ. ಇದರಿಂದ ಯಾವುದೇ ಮಾರಣಾಂತಿಕ ಕಾಯಿಲೆ ಇದ್ದರೂ ನಿವಾರಣೆಯಾಗುತ್ತದೆಯಂತೆ.