ಗಣಪತಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಯಾಕೆಂದರೆ ಗಣಪತಿ ಯಾವುದೇ ಕೆಲಸದಲ್ಲಿ ಬರುವಂತಹ ವಿಘ್ನಗಳನ್ನು ನಿವಾರಿಸುತ್ತಾನಂತೆ. ಹಾಗಾಗಿ ಆತನನ್ನು ಯಾವುದೇ ಶುಭ ಕಾರ್ಯ ಮಾಡುವಾಗ ಮೊದಲ ಬಾರಿಗೆ ಪೂಜಿಸಲಾಗುತ್ತದೆ. ಹಾಗಾಗಿ ನೀವು ಗಣಪತಿಯ ಅನುಗ್ರಹ ಪಡೆಯಲು ಬುಧವಾರದಂದು ಈ ಕೆಲಸ ಮಾಡಿಸಿ.
ಬುಧವಾರದಂದು ಗಣಪತಿಗೆ ಬಾಳೆಹಣ್ಣನ್ನು ಅರ್ಪಿಸಿ. ಇದರಿಂದ ಗಣಪತಿಗೆ ಸಂತೋಷವಾಗುತ್ತದೆ. ಇದರಿಂದ ಗಣಪತಿಯ ಅನುಗ್ರಹ ದೊರೆಯುತ್ತದೆಯಂತೆ.
ಹಾಗೇ ಬುಧವಾರದಂದು ಗಣಪತಿಗೆ ಅರಿಶಿನವನ್ನು ಅರ್ಪಿಸಿ. ಇದು ತುಂಬಾ ಮಂಗಳಕರವಾಗಿದೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ.
Blessed by Ganesha: ಈ ರಾಶಿಯವರಿಗೆ ಜೀವನದಲ್ಲಿ ಅಡೆತಡೆಗಳು ಎದುರಾದರೆ ಅದನ್ನು ಗಣೇಶ ನಿವಾರಿಸುತ್ತಾನಂತೆ…!
ಬುಧವಾರದಂದು ಗಣೇಶನಿಗೆ ತೆಂಗಿನಕಾಯಿಯನ್ನು ಅರ್ಪಿಸಿ. ಇದರಿಂದ ಮನೆಯಲ್ಲಿ ಹಣದ ಹೊಳೆ ತುಂಬುತ್ತದೆ.
ಬುಧವಾರದಂದು ಗಣೇಶನನ್ನು ಪೂಜಿಸುವಾಗ ಲಡ್ಡು ಮತ್ತು ಮೋದಕವನ್ನು ಅರ್ಪಿಸಿ. ಇದರಿಂದ ನಿಮ್ಮ ಆಸೆ ಈಡೇರುತ್ತದೆ.