Kannada Duniya

ಬುಧವಾರದಂದು ಈ ಕ್ರಮಗಳನ್ನು ಪಾಲಿಸಿದರೆ ಕಷ್ಟಗಳು ದೂರವಾಗುತ್ತವೆಯಂತೆ…!

ವಾರದಲ್ಲಿ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಅದರಂತೆ ಬುಧವಾರದಂದು ಗಣೇಶನಿಗೆ ಸಮರ್ಪಿಸಲಾಗಿದೆ. ಹಾಗಾಗಿ ಈ ದಿನ ಗಣೇಶನನ್ನು ಈ ರೀತಿ ಪೂಜಿಸಿದರೆ ನಿಮ್ಮ ಜೀವನದಲ್ಲಿ ಎದುರಾದ ಕಷ್ಟಗಳು ನಿವಾರಣೆಯಾಗುತ್ತದೆಯಂತೆ.

ಬುಧವಾರ ಬೆಳಿಗ್ಗೆ ಸ್ನಾನಾಧಿಗಳನ್ನು ಮುಗಿಸಿದ ನಂತರ ಗಣೇಶನಿಗೆ ಪೂಜೆ ಸಲ್ಲಿಸಿ. ಗಣಪತಿಯು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.

ಈ ರಾಶಿಯವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದಾರೆ, ಪ್ರತಿ ಸವಾಲನ್ನು ಗೆಲ್ಲುತ್ತಾರೆ…!

ಹಾಗೇ ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸಿ. ಹಾಗೇ ಹಸಿರು ಬಟ್ಟೆ ಮತ್ತು ಹೆಸರುಬೇಳೆಯನ್ನು ದಾನ ಮಾಡಿ.

ಅಲ್ಲದೇ ಬುಧವಾರದಂದು ಹಸುವಿಗೆ ಹಸಿರು ಮೇವನ್ನು ತಿನ್ನಿಸಿದರೆ ಒಳ್ಳೆಯದು. ಹಾಗೇ ಗಣಪತಿಯ ತಲೆಯ ಮೇಲೆ ಸಿಂಧೂರವನ್ನು ಹಚ್ಚಿ. ಇದರಿಂದ ನಿಮ್ಮ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ.

ಹಾಗೇ ಬುಧವಾರದಂದು ಗಣೇಶನಿಗೆ ಲಡ್ಡು, ಮೋದಕಗಳನ್ನು ಅರ್ಪಿಸಿ. ಹಾಗೇ ಶಮಿ ಎಲೆಗಳನ್ನು ಗಣೇಶನಿಗೆ ಅರ್ಪಿಸಿದರೆ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳು ದೂರವಾಗುತ್ತದೆ. ಈ ದಿನ “ಓಂ ಗಣ ಗಣಪತಯೇ ನಮಃ” ಮಂತ್ರವನ್ನು ಜಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...