ವಾರದ ಏಳು ದಿನಗಳಲ್ಲಿ ಒಂದೊಂದು ದಿನಗಳನ್ನು ಒಂದೊಂದು ದೇವರುಗಳಿಗೆ ಮೀಸಲಿಡಲಾಗಿದೆ. ಅದೇರೀತಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಗಣಪತಿಯನ್ನು ಮೊದಲು ಪೂಜಿಸಲಾಗುತ್ತದೆ. ಗಣೇಶನ ಪೂಜೆಯಿಂದ ಸಂಕಷ್ಟಗಳು ದೂರವಾಗುತ್ತದೆ. ಹಾಗಾಗಿ ಬುಧವಾರದಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ಆರ್ಥಿಕ ಮುಗ್ಗಟ್ಟು ಉಂಟಾಗಬಹುದು.
ಬುಧವಾರದಂದು ಯಾವುದೇ ಆನೆಗೆ ಹಾನಿ ಮಾಡಬೇಡಿ. ಇದರಿಂದ ಗಣಪತಿ ಕೋಪಗೊಳ್ಳುತ್ತಾನೆ. ಇದರಿಂದ ಹೊಸ ಸಮಸ್ಯೆ ಕಾಡುತ್ತದೆ.
ಬುಧವಾರದಂದು ತಪ್ಪಾಗಿಯೂ ಸಿಂಧೂರಕ್ಕೆ ಅಗೌರವವನ್ನು ನೀಡಬೇಡಿ ಇದರಿಂದ ತೊಂದರೆಗಳು ಬಂದು ನಿಮ್ಮನ್ನು ಕಾಡುತ್ತವೆ. ಏಕೆಂದರೆ ಸಿಂಧೂರ ಗಣೇಶನಿಗೆ ಪ್ರಿಯವಾಗಿದೆ.
ಫೆಂಗ್ ಶೂಯಿ ಈ ಪರಿಹಾರವನ್ನು ಮಾಡಿದರೆ ತಕ್ಷಣ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
ಬುಧವಾರದಂದು ಹಾಲಿನಿಂದ ಮಾಡಿದ ಯಾವುದೇ ಭಕ್ಷ್ಯಗಳನ್ನು ತಯಾರಿಸಬಾರದು. ಯಾಕೆಂದರೆ ಬುಧವಾರ ಹಾಲು ಕುದಿಸುವುದು ಒಳ್ಳೆ ಯದಲ್ಲ.
ಬುಧವಾರದಂದು ಹೆಣ್ಣುಮಕ್ಕಳಿಗೆ ಹಾಗೂ ಮಂಗಳಮುಖಿಯರಿಗೆ ಅವಮಾನ ಮಾಡಬೇಡಿ. ಇದರಿಂದ ತೊಂದರೆಗಳು ಹೆಚ್ಚಾಗುತ್ತದೆ.
ಬುಧವಾರ ಪಾನ್ ಸೇವಿಸಿದರೆ ಹಣದ ನಷ್ಟ ಮತ್ತು ಆರ್ಥಿಕ ಪರಿಸ್ಥಿತಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಹಾಗೇ ಬುಧವಾರದಂದು ಹೊಸ ಬೂಟು ಮತ್ತು ಬಟ್ಟೆಗಳನ್ನು ಖರೀದಿಸಬೇಡಿ. ಆದರೆ ಹೊಸ ವಸ್ತುವನ್ನು ಧರಿಸಿದರೆ ಒಳ್ಳೆಯದಾಗುತ್ತದೆ.