ಹಿಂದೂಧರ್ಮದಲ್ಲಿ ಪ್ರತಿಯೊಂದು ದೇವರಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಮನುಷ್ಯರು ಕಷ್ಟ ಬಂದಾಗ ಇಷ್ಟವಾದ ದೇವರನ್ನು ಸ್ಮರಿಸುತ್ತಾರೆ. ಆದರೆ ನಮ್ಮ ಒಂದೊಂದು ಸಮಸ್ಯೆಗೂ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ. ಹಾಗಾಗಿ ನಿಮ್ಮ ಯಾವ ಸಮಸ್ಯೆಗೆ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ.
ನಿಮಗೆ ಹಣಕಾಸಿನ ಸಮಸ್ಯೆ ಇದ್ದರೆ ಲಕ್ಷ್ಮಿ, ವಿಷ್ಣು ಮತ್ತು ಕುಬೇರನನ್ನು ಪೂಜಿಸಿ. ಯಾಕೆಂದರೆ ಈ ದೇವರುಗಳು ಸಂಪತ್ತಿಗೆ ಅಧಿಪತಿಗಳಂತೆ.
ಹಾಗೇ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಸೀತಾ ರಾಮ, ಶಿವ ಪಾರ್ವತಿ ಮತ್ತು ರಾಧಾ ಕೃಷ್ಣರನ್ನು ಪೂಜೆ ಮಾಡಿ.
ನಿಮ್ಮ ಬಿಕ್ಕಟ್ಟನ್ನು ನಿವಾರಿಸಲು ಹನುಮಂತನ್ನು ಜಪಿಸಿ. ಆತ ಯಾವುದೇ ಬಿಕ್ಕಟ್ಟನ್ನು ನಿವಾರಿಸುತ್ತಾನಂತೆ.
ನಿಮಗೆ ಶಿಕ್ಷಣದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ವಿದ್ಯಾದೇವತೆ ಸರಸ್ವತಿ ದೇವಿಯನ್ನು ಪೂಜಿಸಿ. ಇದರಿಂದ ನೀವು ಶಿಕ್ಷಣ ಕ್ಷೇತ್ರದಲ್ಲಿ ಏಳಿಗೆ ಕಾಣುತ್ತೀರಂತೆ.
ನಿಮ್ಮ ತೊಂದರೆಗಳನ್ನು ನಿವಾರಿಸಲು ಶನಿದೇವನನ್ನು ಆರಾಧಿಸಿ. ಹಾಗೇ ನಿಮ್ಮ ಕೆಲಸದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಲು ಗಣೇಶನನ್ನು ಪೂಜಿಸಿ.