Kannada Duniya

ನಿಮ್ಮ ಯಾವುದೇ ಸಮಸ್ಯೆಗೆ ಅಕ್ಕಿಯಿಂದ ಈ ಪರಿಹಾರವನ್ನು ಮಾಡಿ

ಹಿಂದೂಧರ್ಮದಲ್ಲಿ ಅಕ್ಕಿಯನ್ನು ದೇವಿ ಅನ್ನಪೂರ್ಣೇಶ್ವರಿಯ ಸ್ವರೂಪವೆಂದು ನಂಬಲಾಗುತ್ತದೆ. ಹಾಗಾಗಿ ಯಾವುದೇ ಶುಭ ಕಾರ್ಯಕ್ಕೆ ಅಕ್ಕಿಯನ್ನು ಅಕ್ಷತೆಯ ರೂಪದಲ್ಲಿ ಬಳಸುತ್ತಾರೆ. ಹಾಗಾದ್ರೆ ಈ ಅಕ್ಕಿಯನ್ನು ಬಳಸಿ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ.

ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಅಂತವರು ಅಕ್ಕಿಯಿಂದ ಸಿಹಿತಿಂಡಿಯನ್ನು ತಯಾರಿಸಿ ಕಾಗೆಗಳಿಗೆ ಹಾಕಿ. ಇದರಿಂದ ವ್ಯಾಪಾರ, ಉದ್ಯೋಗದಲ್ಲಿ ಯಶಸ್ಸು ಲಭಿಸುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಿಮ್ಮ ಹಣಕಾಸು ಹೆಚ್ಚಾಗಲು 21 ಅಕ್ಕಿ ಕಾಳುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ನಿಮ್ಮ ಪರ್ಸ್ ನಲ್ಲಿ ಇಡಿ. ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆಯಂತೆ.

ಹಾಗೇ ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅಕ್ಕಿಯಲ್ಲಿ ಎಳ್ಳು ಮತ್ತು ಹಾಲನ್ನು ಬೆರೆಸಿ ಹವನಕ್ಕೆ ಅರ್ಪಿಸಿ. ಇದರಿಂದ ನಿಮಗೆ ಲಕ್ಷ್ಮಿದೇವಿಯ ಅನುಗ್ರಹ ದೊರತು ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆಯಂತೆ.

ಪಿತೃದೋಷ ನಿವಾರಣೆಯಾಗಲು ಅಮಾವಾಸ್ಯೆಯ ದಿನ ಅಕ್ಕಿಯಿಂದ ಖೀರ್ ತಯಾರಿಸಿ ಕಾಗೆಗಳಿಗೆ ನೀಡಿ.

ರೋಗರುಜಿನಗಳು ನಿವಾರಣೆಯಾಗಲು ಸೋಮವಾರದಂದು ಶಿವಲಿಂಗಕ್ಕೆ ಅಕ್ಕಿ ಬೆರೆಸಿ ಹಾಲಿನಿಂದ ಅಭಿಷೇಕ ಮಾಡಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...