ಮಕರ ಸಂಕ್ರಾಂತಿಗೆ ಹಿಂದೂಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ಜನವರಿ 15ರಂದು ಹಿಂದೂಧರ್ಮದಲ್ಲಿ ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದು ತುಂಬಾ ವಿಶೇಷವಾದ ದಿನವಾದ್ದರಿಂದ ಈ ದಿನ ಕೆಲವು ಕ್ರಮಗಳನ್ನು ಮಾಡುವುದರಿಂದ ನಿಮ್ಮ ಪಾಪಕರ್ಮಗಳಿಗ ಮುಕ್ತಿ ಪಡೆಯಬಹುದಂತೆ.
ಈ ದಿನ ಗಂಗಾಜಲದಿಂದ ಸ್ನಾನ ಮಾಡಿದರೆ ಒಳ್ಳೆಯದಂತೆ. ನೀವು ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಿ. ಇಲ್ಲವಾದರೆ ಯಾವುದಾದರೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.
ಈ ದಿನ ಬೆಲ್ಲ ಮತ್ತು ಎಳ್ಳಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ಬಡವರಿಗೆ ದಾನ ಮಾಡಿ, ಇದರಿಂದ ನಿಮ್ಮ ಪಾಪಗಳು ನಿವಾರಣೆಯಾಗಿ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.
ಈ ದಿನ ಬಡವರು ಮತ್ತು ನಿರ್ಗತಿಕರು ಹಾಗೂ ಹಿರಿಯರಿಗೆ ಗೌರವವನ್ನು ನೀಡಿ. ಅವರಿಗೆ ಅವಮಾನ ಮಾಡಬೇಡಿ. ಇದು ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ.
ಅಲ್ಲದೇ ಈ ದಿನ ಎಳ್ಳು ಮತ್ತು ಬೆಲ್ಲವನ್ನು ಸೂರ್ಯದೇವನಿಗೆ ಅರ್ಪಿಸಿ ನಂತರ ಅದನ್ನು ಪ್ರಸಾದ ರೂಪದಲ್ಲಿ ಸೇವಿಸಿದರೆ ಸೂರ್ಯನ ಅನುಗ್ರಹ ನಿಮಗೆ ದೊರೆಯುತ್ತದೆಯಂತೆ.
ಹಾಗೇ ಈ ದಿನ ಸೂರ್ಯ ದೇವಾಲಯಕ್ಕೆ ಹೋಗಿ ದೇವರನ್ನು ಪೂಜೆ ಮಾಡಿದರೆ ಸೂರ್ಯನ ಅನುಗ್ರಹದಿಂದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಲಭಿಸುತ್ತದೆಯಂತೆ.