Kannada Duniya

ನಿಮ್ಮ ಪಾಪಗಳಿಂದ ಮುಕ್ತಿ ಪಡೆಯಲು ಮಕರ ಸಂಕ್ರಾಂತಿಯ ದಿನ ಈ ಕೆಲಸ ಮಾಡಿ

ಮಕರ ಸಂಕ್ರಾಂತಿಗೆ ಹಿಂದೂಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ಜನವರಿ 15ರಂದು ಹಿಂದೂಧರ್ಮದಲ್ಲಿ ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದು ತುಂಬಾ ವಿಶೇಷವಾದ ದಿನವಾದ್ದರಿಂದ ಈ ದಿನ ಕೆಲವು ಕ್ರಮಗಳನ್ನು ಮಾಡುವುದರಿಂದ ನಿಮ್ಮ ಪಾಪಕರ್ಮಗಳಿಗ ಮುಕ್ತಿ ಪಡೆಯಬಹುದಂತೆ.

ಈ ದಿನ ಗಂಗಾಜಲದಿಂದ ಸ್ನಾನ ಮಾಡಿದರೆ ಒಳ್ಳೆಯದಂತೆ. ನೀವು ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಿ. ಇಲ್ಲವಾದರೆ ಯಾವುದಾದರೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.

ಈ ದಿನ ಬೆಲ್ಲ ಮತ್ತು ಎಳ್ಳಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ಬಡವರಿಗೆ ದಾನ ಮಾಡಿ, ಇದರಿಂದ ನಿಮ್ಮ ಪಾಪಗಳು ನಿವಾರಣೆಯಾಗಿ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.

ಈ ದಿನ ಬಡವರು ಮತ್ತು ನಿರ್ಗತಿಕರು ಹಾಗೂ ಹಿರಿಯರಿಗೆ ಗೌರವವನ್ನು ನೀಡಿ. ಅವರಿಗೆ ಅವಮಾನ ಮಾಡಬೇಡಿ. ಇದು ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ.

ಅಲ್ಲದೇ ಈ ದಿನ ಎಳ್ಳು ಮತ್ತು ಬೆಲ್ಲವನ್ನು ಸೂರ್ಯದೇವನಿಗೆ ಅರ್ಪಿಸಿ ನಂತರ ಅದನ್ನು ಪ್ರಸಾದ ರೂಪದಲ್ಲಿ ಸೇವಿಸಿದರೆ ಸೂರ್ಯನ ಅನುಗ್ರಹ ನಿಮಗೆ ದೊರೆಯುತ್ತದೆಯಂತೆ.

ಹಾಗೇ ಈ ದಿನ ಸೂರ್ಯ ದೇವಾಲಯಕ್ಕೆ ಹೋಗಿ ದೇವರನ್ನು ಪೂಜೆ ಮಾಡಿದರೆ ಸೂರ್ಯನ ಅನುಗ್ರಹದಿಂದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಲಭಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...