Kannada Duniya

ಜೀವನದಲ್ಲಿ ಅಡೆತಡೆಗಳು ಎದುರಾದರೆ ಅದನ್ನು ಗಣೇಶ ನಿವಾರಿಸುತ್ತಾನಂತೆ…!

ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯುತ್ತಾರೆ. ಹಾಗಾಗಿ ಯಾವುದೇ ಶುಭ ಕಾರ್ಯವನ್ನು ಮಾಡುವಾಗ ಗಣೇಶನ ಪೂಜೆ ಮಾಡುತ್ತಾರೆ. ಆದರೆ ಈ ರಾಶಿಯಲ್ಲಿ ಜನಿಸಿದವರಿಗೆ ಗಣೇಶನ ಅನುಗ್ರಹ ಸದಾ ಇರುತ್ತದೆಯಂತೆ. ಅವರ ಜೀವನದಲ್ಲಿ ಎದುರಾದ ಅಡೆತಡೆಗಳನ್ನು ಗಣೇಶ ನಿವಾರಿಸುತ್ತಾನಂತೆ.

ಮೇಷ ರಾಶಿ : ಇವರ ಮೇಲೆ ಗಣೇಶನ ವಿಶೇಷ ಅನುಗ್ರಹವಿದೆ. ಇವರು ಬಹಳ ಬುದ್ಧಿವಂತರು. ಎಲ್ಲದರಲ್ಲೂ ಪರಿಣತರು. ಇವರಿಗೆ ಗಣೇಶನ ಕೃಪೆಯಿಂದ ಯಶಸ್ಸು ಸಿಗುತ್ತದೆ. ಹಾಗಾಗಿ ನಿಯಮಕ್ಕನುಸಾರವಾಗಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಬೇಕು.

ಮಿಥುನ ರಾಶಿ : ಇವರಿಗೂ ಕೂಡ ಗಣಪತಿಯ ಕೃಪೆ ಇರುತ್ತದೆ. ಇವರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸುತ್ತಾರೆ. ಹಾಗಾಗಿ ಇವರು ಪ್ರತಿದಿನ ಗಣಪತಿಯ ಪೂಜೆ ಮಾಡಬೇಕು.  ಇವರು ಬಹಳ ಬುದ್ಧಿವಂತರಾಗಿರುತ್ತಾರೆ.

ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ವಿದ್ಯಾರ್ಥಿಗಳು ಈ ರುದ್ರಾಕ್ಷಿಯನ್ನು ಧರಿಸಿ

ಮಕರ ರಾಶಿ : ಇವರ ಮೇಲೆ ಗಣೇಶನ ದಯೆ ಇರುತ್ತದೆ. ಇವರನ್ನು ಕುರುಡಾಗಿ ನಂಬಬಹುದು. ಇವರ ಮನಸ್ಸು ಬಹಳ ಪರಿಶುದ್ಧವಾಗಿರುತ್ತದೆ. ಇವರು ಶಿಕ್ಷಣ ಕ್ಷೇತ್ರದಲ್ಲೂ ಬಹಳ ಹೆಸರು ಗಳಿಸುತ್ತಾರೆ. ಹಾಗಾಗಿ ಇವರು ಪ್ರತಿದಿನ ಗಣಪತಿಯ ಪೂಜೆ ಮಾಡಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...