Kannada Duniya

ಚಾಣಕ್ಯ ನೀತಿ; ನಿಮ್ಮ ಜೀವನದಲ್ಲಿ ಕಷ್ಟಗಳು ಹತ್ತಿರ ಸುಳಿಯದಿರಲು ಇವುಗಳನ್ನು ಅಳವಡಿಸಿಕೊಳ್ಳಿ….!

ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳಿರುತ್ತದೆ. ಕೆಲವರು ಅದನ್ನು ನಗುನಗುತ್ತಾ ಎದುರಿಸುತ್ತಾರೆ. ಕೆಲವರು ನಿರಾಶೆಗೊಳ್ಳುತ್ತಾರೆ. ಆದರೆ ಅನೇಕ ಸಮಸ್ಯೆಗಳನ್ನು ನಾವೇ ಸೃಷ್ಟಿಸಿಕೊಳ್ಳುತ್ತವೆ. ಆದರೆ ಚಾಣಕ್ಯ ಅವರು ತಿಳಿಸಿದಂತೆ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಕಷ್ಟಗಳು ಹತ್ತಿರ ಸುಳಿಯುವುದಿಲ್ಲವಂತೆ.

ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ಕೆಟ್ಟ ಜನರಿಂದ ದೂರವಿರಿ. ಏಕೆಂದರೆ ದುಷ್ಟರ ಸಹವಾಸವು ಹಲವು ಸಂಕಷ್ಟಗಳಲ್ಲಿ ಸಿಲುಕಿಸುವಂತೆ ಮಾಡುತ್ತದೆ.

ಸುಳ್ಳು ಹೇಳುವುದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ. ಆದರೆ ಸತ್ಯವನ್ನು ಮಾತನಾಡುವ ವ್ಯಕ್ತಿಗೆ ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ ಕೊನೆಯಲ್ಲಿ ಯಶಸ್ಸು ಮತ್ತು ಗೌರವ ಸಿಗುತ್ತದೆ.

ಹಾಗೇ ನೀವು ಕಷ್ಟಗಳು ಬರದಂತೆ ಸಂತೋಷವಾಗಿರಲು ಮೊದಲು ನೀವು ಆರೋಗ್ಯವಾಗಿರಬೇಕು. ಅದಕ್ಕಾಗಿ ಶುದ್ಧ ಆಹಾರ, ನೀರನ್ನು ಸೇವಿಸಿ. ಇದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತದೆ.

ಅಂಗೈಯಲ್ಲಿ ಈ ರೇಖೆ ಇದ್ದರೆ ನೀವು ಜೈಲು ಪಾಲಾಗುವುದು ಖಂಡಿತ

ಚಾಣಕ್ಯರು ತಿಳಿಸಿದಂತೆ ಪ್ರತಿಯೊಂದು ಕೆಲಸವನ್ನು ತುಂಬು ಹೃದಯದಿಂದ ಮಾಡಬೇಕು. ಅಜಾಗರೂಕತೆಯಿಂದ ಮಾಡಿದ ಕೆಲಸಗಳಿದ ಕೆಟ್ಟದಾಗುತ್ತದೆ.

ಯೋಚಿಸದೆ ಮಾಡಿದ ಕ್ರಮಗಳು ಮತ್ತು ನಿರ್ಧಾರಗಳು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸುತ್ತದೆ. ಹಾಗಾಗಿ ಸರಿಯಾಗಿ ಯೋಚಿಸಿ ನಿರ್ಧಾರಗಳನ್ನು ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...