ತನ್ನ ಬುದ್ದಿವಂತಿಕೆಯಿಂದ ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಆಚಾರ್ಯ ಚಾಣಕ್ಯರ ನೀತಿಗಳು ಇಂದಿನ ಕಾಲದಲ್ಲೂ ಪ್ರಸಿದ್ಧವಾಗಿದೆ. ಅವರ ನೀತಿಗಳನ್ನು ಅನುಸರಿಸುವ ವ್ಯಕ್ತಿಯು ತನ್ನ ಜೀವನದಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಮಾನವ ಸಮಾಜದ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ ಅವರ ಪ್ರಕಾರ ಒಳ್ಳೆಯ ಸ್ನೇಹಿತ, ಸಹೋದರ ಮತ್ತು ಹೆಂಡತಿ ಈ ರೀತಿಯಲ್ಲಿ ಗುರುತಿಸಲಾಗುತ್ತದೆಯಂತೆ.
ಆಚಾರ್ಯ ಚಾಣಕ್ಯರ ಪ್ರಕಾರ, ಕೆಲಸದ ಸಮಯದಲ್ಲಿ ನಿಮಗೆ ಸೇವೆ ಮಾಡುವಂತಹ, ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡುವಂತವರು ನಿಜವಾದ ಸಹೋದರರೆನಿಸಿಕೊಳ್ಳುತ್ತಾರೆ. ಹಾಗೇ ಕಷ್ಟದ ಸಂದರ್ಭಗಳಲ್ಲಿ ಗಂಡನನ್ನು ಬೆಂಬಲಿಸುವ ಪತ್ನಿ ನಿಜವಾದ ಜೀವನ ಸಂಗಾತಿ ಎನಿಸಿಕೊಳ್ಳುತ್ತಾಳೆ. ಅಂತೆಯೇ ಕಷ್ಟಕಾಲದಲ್ಲಿದ್ದಾಗ ಮತ್ತು ಶತ್ರುಗಳು ಸುತ್ತುವರಿದಾಗ ನಿಮ್ಮನ್ನು ಬೆಂಬಲಿಸುವ ವ್ಯಕ್ತಿ ನಿಜವಾದ ಸ್ನೇಹಿತನೆನಿಸಿಕೊಳ್ಳುತ್ತಾನೆ ಎಂದು ಅವರು ತಿಳಿಸಿದ್ದಾರೆ.
Rashis that bring luck: ಈ 3 ರಾಶಿಯವರು ತಂದೆಗೆ ತುಂಬಾ ಅದೃಷ್ಟವಂತರು
ಹಾಗೇ ಆಚಾರ್ಯ ಚಾಣಕ್ಯರು ಸ್ನೇಹ ಬೆಳೆಸುವಾಗ ಎಚ್ಚರಿಕೆಯಿಂದಿರಬೇಕು. ಏಕೆಂದರೆ ಕೆಟ್ಟ ಸ್ನೇಹಿತ ನಿಮ್ಮನ್ನು ಮೋಸಗಳಿಸಬಹುದು. ಹಾಗೇ ಹಣದ ವಿಚಾರದಲ್ಲಿ ಯಾರನ್ನೂ ನಂಬಬಾರದು. ಏಕೆಂದರೆ ಹಣ ಎಲ್ಲರ ನಂಬಿಕೆಯನ್ನು ಬುಡಮೇಲು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.