ಮಾತು ಮತ್ತು ಬುದ್ಧಿಯ ಅಂಶವಾದ ಬುಧ ಗ್ರಹವು ಆಗಸ್ಟ್ 26 ರಂದು ತನ್ನ ರಾಶಿ ಚಕ್ರವನ್ನು ಬದಲಾಯಿಸಲಿದೆ. ಅದರಂತೆ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಸೆಪ್ಟೆಂಬರ್ 22 ರವರೆಗೆ ಆ ರಾಶಿಯಲ್ಲಿರುತ್ತಾನೆ. ಇದರಿಂದ ಕೆಲವು ರಾಶಿಚಕ್ರದವರಿಗೆ ಶುಭವಾಗಲಿದೆ. ಅದು ಯಾವ ರಾಶಿ ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ : ಬುಧನ ಸಂಚಾರವು ನಿಮಗೆ ಅತ್ಯಂತ ಶುಭಕರ. ನೀವು ಈ ಸಮಯದಲ್ಲಿ ವಾಹನ ಖರೀದಿಸಬಹುದು. ಕಚೇರಿಯ ಕೆಲಸದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಕಠಿಣ ಶ್ರಮ ಮತ್ತು ಬುದ್ಧಿವಂತಿಕೆಯಿಂದ ಹಣ ಗಳಿಸುತ್ತೀರಿ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಅವಕಾಶಗಳು ಬರಲಿವೆ.
ಸಿಂಹ ರಾಶಿ : ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವ ಜನರ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯಾಪಾರ ಮಾಡುವವರಿಗೆ ಇದು ಸಮಯವಾಗಲಿದೆ. ಉತ್ತಮ ಲಾಭ ಗಳಿಸುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಲಿದೆ.
ಇಂತಹ ಸ್ಥಳಗಳಲ್ಲಿ ವಾಸಿಸಬೇಡಿ, ಇದರಿಂದ ನಕರಾತ್ಮಕ ಆಲೋಚನೆಗಳು ಬರುತ್ತದೆ
ಕನ್ಯಾ ರಾಶಿ : ಈ ರಾಶಿಯ ಜನರು ಈ ಸಮಯದಲ್ಲಿ ಪ್ರತಿಯೊಂದು ಕೆಲಸದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಕೆಲಸ ಮಾಡುವ ಜನರಿಗೆ ಈ ಸಮಯವು ವಿಶೇಷವಾಗಲಿದೆ. ಕಠಿಣ ಪರಿಶ್ರಮದಿಂದ ನಿಮಗೆ ಯಶಸ್ಸು ಸಿಗಲಿದೆ. ಮನೆ ಖರೀದಿಸಲು ಮತ್ತು ಹೊಸ ಕೆಲಸ ಆರಂಭಿಸಲು ಇದು ಉತ್ತಮ ಸಮಯ.