Kannada Duniya

ಅಂಗಡಿ ವ್ಯವಹಾರದಲ್ಲಿ ಪ್ರಗತಿ ಗಳಿಸಲು ಈ ವಾಸ್ತು ಕ್ರಮ ಕೈಗೊಳ್ಳಿ…!

ನಿಯಮಗಳನ್ನು ಸರಿಯಾಗಿ ಪಾಲಿಸಿ. ಇದರಿಂದ ನೀವು ವ್ಯವಹಾರದಲ್ಲಿ ಲಾಭ ಗಳಿಸಬಹುದು. ಹಾಗಾಗಿ ಈ ವಾಸ್ತು ನಿಯಮವನ್ನು ಪಾಲಿಸಿ.

-ವಾಸ್ತು ಪ್ರಕಾರ ಅಂಗಡಿಯನ್ನು ಯಾವಾಗಲೂ ಮುಂಜಾನೆಯೇ ತೆರೆಯಬೇಕು. ಮತ್ತು ಸೂರ್ಯ ದೇವನನ್ನು ವಂದಿಸುವ ಮೂಲಕ ಕೆಲಸವನ್ನು ಪ್ರಾರಂಭಿಸಬೇಕು. ಇದರಿಂದ ಎಲ್ಲಾ ಗ್ರಹಗಳು ಸಮತೋಲನದಲ್ಲಿದ್ದು, ಪ್ರಗತಿ ಸಾಧಿಸಬಹುದು.

-ವಾಸ್ತು ಪ್ರಕಾರ ಪೂರ್ವ ದಿಕ್ಕಿನಲ್ಲಿ ಮುಖಗಳನ್ನು ತೆರೆದಿರುವ ಅಂಗಡಿಯಲ್ಲಿ ದೇವರ ಫೋಟೊವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಿಂದ ವ್ಯವಹಾರದಲ್ಲಿ ವೃದ್ಧಿಯಾಗುತ್ತದೆ.

-ಹಾಗೇ ವಾಸ್ತು ಪ್ರಕಾರ ಅಂಗಡಿಯ ಮುಂಭಾಗ ಅಗಲವಾಗಿದ್ದು, ಹಿಂಭಾಗ ಚಿಕ್ಕದಾಗಿದ್ದರೆ ವ್ಯವಹಾರದಲ್ಲಿ ಲಾಭವನ್ನು ಗಳಿಸಬಹುದು.

ತಮಿಳುನಾಡಿನ ಕೊಯಮತ್ತೂರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಈ 7 ಅದ್ಭುತ ಸ್ಥಳಗಳಿಗೆ ಭೇಟಿ ನೀಡಬೇಕು….!

-ಅಂಗಡಿ ಪೂರ್ವದಿಕ್ಕಿನಲ್ಲಿದ್ದರೆ ಅಂಗಡಿಯ ಕೌಂಟರ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿ. ನಿಮ್ಮ ಮುಖವನ್ನು ಉತ್ತರ ದಿಕ್ಕಿಗೆ ಹಾಕಿ ಕುಳಿತುಕೊಳ್ಳಿ. ಇದರಿಂದ ವ್ಯವಹಾರದಲ್ಲಿ ಲಾಭಗಳಿಸಬಹುದು.

-ವಾಸ್ತು ಪ್ರಕಾರ ಅಶ್ಲೀಲ ವಸ್ತುಗಳನ್ನು ಅಂಗಡಿಯಲ್ಲಿ ಇಡಬಾರದು. ಇದರಿಂದ ನಿಮ್ಮ ವ್ಯವಹಾರ ಕೆಡುತ್ತದೆ. ನಷ್ಟ ಅನುಭವಿಸುತ್ತೀರಿ.

-ಲಕ್ಷ್ಮಿ, ಶ್ರೀಯಂತ್ರವನ್ನು ಅಂಗಡಿಯ ಮೂಲೆಯಲ್ಲಿ ಇಡುವುದು ವ್ಯವಹಾರದ ಪ್ರಗತಿಗೆ ಕಾರಣವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...