ಸಾಂಬಾರು, ರಸಂ ಅನ್ನು ತಯಾರಿಸಲು ಹೆಚ್ಚಾಗಿ ತೊಗರಿಬೇಳೆಯನ್ನು ಬಳಸುತ್ತಾರೆ. ಆದರೆ ಈ ಬೇಳೆಯನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಂತೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ.
ತೊಗರಿಬೇಳೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆಯಂತೆ. ಇದು ದೇಹದಲ್ಲಿ ಯೂರಿಕ್ ಆಮ್ಲದ ಸಮಸ್ಯೆಯನ್ನುಹೆಚ್ಚಿಸುತ್ತದೆಯಂತೆ. ಇದರಿಂದ ಕೀಲು ನೋವಿನ ಸಮಸ್ಯೆ ಕಾಡುತ್ತದೆಯಂತೆ.
ಹಾಗೇ ಗ್ಯಾಸ್ ಸಮಸ್ಯೆ ಇರುವವರು ತೊಗರಿಬೇಳೆಯನ್ನು ಹೆಚ್ಚು ಸೇವಿಸಬೇಡಿ. ಇದನ್ನು ಜೀರ್ಣಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ, ಇದರಿಂದ ಗ್ಯಾಸ್, ಹುಳಿ ತೇಗು, ಮಲಬದ್ಧತೆ ಸಮಸ್ಯೆ ಕಾಡುತ್ತದೆಯಂತೆ.
ಹಾಗೇ ಪೈಲ್ಸ್ ಸಮಸ್ಯೆ ಇರುವವರು ಇದನ್ನು ತಿನ್ನಬೇಡಿ. ಇದು ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುವುದರಿಂದ ಇದರಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಇದು ಪೈಲ್ಸ್ ಸಮಸ್ಯೆಯನ್ನುಂಟುಮಾಡುತ್ತದೆಯಂತೆ.
ಇದರಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವ ಕಾರಣ ಇದು ಕಿಡ್ನಿಗೆ ಹಾನಿಕಾರಕವಾಗಿದೆ. ಹಾಗಾಗಿ ಕಿಡ್ನಿ ಸಮಸ್ಯೆ ಇರುವವರು ಇದನ್ನು ಸೇವಿಸಬೇಡಿ.