ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಇದು ನಮ್ಮ ದೇಹದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಹೊರಹಾಕಿ ದೇಹದ ರಕ್ತವನ್ನು ಶುದ್ಧಗೊಳಿಸುತ್ತದೆ. ಹಾಗಾಗಿ ನಿಮ್ಮ ಕಿಡ್ನಿಯನ್ನು ಯಾವಾಗಲೂ ಆರೋಗ್ಯವಾಗಿಟ್ಟುಕೊಳ್ಳಬೇಕು. ಒಂದುವೇಳೆ ನಿಮ್ಮ ಕಿಡ್ನಿಯಲ್ಲಿ ಸಮಸ್ಯೆ ಇದ್ದರೆ ಅದನ್ನು ಕಣ್ಣು ಮತ್ತು ಚರ್ಮದ ಮೂಲಕ ತಿಳಿದುಕೊಳ್ಳಿ.
ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ನಿಮ್ಮ ಚರ್ಮದಲ್ಲಿ ಶುಷ್ಕತೆ, ತುರಿಕೆ, ಕಲೆಗಳು ಮೂಡುತ್ತದೆ. ಯಾಕೆಂದರೆ ಕಿಡ್ನಿ ರಕ್ತವನ್ನು ಶುದ್ಧಗೊಳಿಸುತ್ತದೆ. ರಕ್ತದಲ್ಲಿ ಕಲ್ಮಶವಿದ್ದಾಗ ಅದು ಚರ್ಮದಲ್ಲಿ ಸಮಸ್ಯೆಯನ್ನುಂಟುಮಾಡುತ್ತದೆ.
ದ್ರಾಕ್ಷಿ ಸೇವಿಸಿ ಈ ಕಾಯಿಲೆಯನ್ನು ದೂರ ಸರಿಸಿ….!
ಹಾಗೇ ಕಿಡ್ನಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ ಕಣ್ಣಿನ ತೊಂದರೆಗಳನ್ನು ಅನುಭವಿಸುತ್ತೇವೆ. ಕಣ್ಣುಗಳ ಸುತ್ತಲೂ ಊತ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆ ಇದ್ದಾಗ ಕಣ್ಣನ್ನು ಪರೀಕ್ಷಿಸಿ. ಆಗ ಕಣ್ಣಿನಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೆ ಅದು ಕಿಡ್ನಿಯ ಸಮಸ್ಯೆ ಎಂಬುದನ್ನು ತಿಳಿಯಿರಿ.