ಹಣವನ್ನು ಪಡೆಯಲು ಕೆಲವರು ಎಲ್ಲಾ ರೀತಿಯ ಕ್ರಮಗಳನ್ನು ಮತ್ತು ತಂತ್ರಗಳನ್ನು ಮಾಡುತ್ತಾರೆ. ಅದರಲ್ಲಿ ಸಹದೇವಿ ಸಸ್ಯಕ್ಕೆ ಸಂಬಂಧಿಸಿದ ಟ್ರಿಕ್ ಅತ್ಯಂತ ಪರಿಣಾಮಕಾರಿಯಾಗಿದೆ. ಇದು ಮನುಷ್ಯರನ್ನು ಬಹಳ ಬೇಗನೆ ಶ್ರೀಮಂತರನ್ನಾಗಿಸುತ್ತದೆಯಂತೆ. ಹಾಗಾದ್ರೆ ಈ ಸಸ್ಯದಿಂದ ಏನು ಮಾಡಬೇಕು ಎಂಬುದನ್ನು ತಿಳಿಯಿರಿ.
ಇದು ಹಣದ ಕೊರತೆಯನ್ನು ಹೋಗಲಾಡಿಸುತ್ತದೆ. ಈ ಸಸ್ಯದ ಬೇರುಗಳನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣವಿಡುವ ಸ್ಥಳದಲ್ಲಿ ಇಟ್ಟರೆ ಹಣದ ಕೊರತೆ ನಿವಾರಣೆಯಾಗುತ್ತದೆ.
ಸಹದೇವಿ ಗಿಡದ ಬೇರನ್ನು ಗಂಗಾಜಲದಲ್ಲಿ ತೊಳೆದು ದೇವರ ಮನೆಯಲ್ಲಿಟ್ಟು ಪ್ರತಿದಿನ ಪೂಜೆ ಮಾಡುವುದರಿಂದ ಮನೆಯಲ್ಲಿ ಆಹಾರದ ಕೊರತೆ ಕಾಡಲ್ಲ ಮತ್ತು ಮನೆಯಲ್ಲಿ ಸಂತೋಷ, ಶಾಂತಿ ನೆಲೆಸಿರುತ್ತದೆ. ಈ ಗಿಡದ ಬೇರಿನಿಂದ ಪ್ರತಿದಿನ ತಿಲಕವನ್ನು ಹಚ್ಚುವುದರಿಂದ ಶತ್ರುಗಳ ಸಮಸ್ಯೆ ಕಾಡಲ್ಲ.
Garuda Purana : ಈ ಜನರ ಮನೆಯಲ್ಲಿ ಎಂದಿಗೂ ಆಹಾರವನ್ನು ಸೇವಿಸಬೇಡಿ, ನೀವು ನರಕವನ್ನು ಅನುಭವಿಸುತ್ತೀರಿ….!
ನಂಬಿಕೆಯ ಪ್ರಕಾರ ರವಿ-ಪುಷ್ಯ ನಕ್ಷತ್ರ, ಪೂರ್ಣಿಮಾ ಅಥವಾ ಅಮವಾಸ್ಯೆಯ ದಿನದಂದು ಸಹದೇವಿಯ ಸಸಿಗಳ ಬೇರನ್ನು ಮನೆಗೆ ತನ್ನಿ. ಹುಣ್ಣಿಮೆಯ ದಿನ ಸೂರ್ಯದಯಕ್ಕೆ ಮೊದಲು ಸ್ನಾನ ಮಾಡಿ . ನಂತರ ಗಂಗಾಜಲದಿಂದ ಸಸ್ಯವನ್ನು ಶುದ್ಧೀಕರಿಸಿ ಬಳಿಕ ಪಂಚಾಮೃತ ಅಭಿಷೇಕ ಮಾಡಿಸಿ ಪೂಜಿಸಿ.