Kannada Duniya

ಈ ವಸ್ತುಗಳನ್ನು ಇಟ್ಟರೆ ಹಣದ ಕೊರತೆ ಕಾಡುತ್ತದೆಯಂತೆ….!

ಮನೆಯ ಮುಖ್ಯ ದ್ವಾರವು ಪ್ರವೇಶದ್ವಾರ ಮಾತ್ರವಲ್ಲ ಮನೆಯಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿ ನೆಲೆಸಲು ಕಾರಣವಾಗುತ್ತದೆ. ಮನೆಗೆ ಲಕ್ಷ್ಮಿ ಮತ್ತು ಅದೃಷ್ಟ ಎರಡೂ ಪ್ರವೇಶಿಸುವ ಸ್ಥಳವಾಗಿದೆ. ಹಾಗಾಗಿ ಪ್ರವೇಶ ದ್ವಾರವನ್ನು ಸ್ವಚ್ಚಗವಾಗಿಡುವುದು ಅವಶ್ಯಕ ಮಾತ್ರವಲ್ಲ ಈ ವಸ್ತುಗಳನ್ನು ಮುಖ್ಯದ್ವಾರದ ಬಳಿ ಇಡಬೇಡಿ.

ಮನೆಯ ಮುಖ್ಯದ್ವಾರ ಲಕ್ಷ್ಮಿದೇವಿಯ ಪ್ರವೇಶ ಎಂದು ನಂಬಲಾಗಿದೆ. ಹಾಗಾಗಿ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕ. ಹಾಗಾಗಿ ಚಪ್ಪಲಿ ಮತ್ತು ಶೂವನ್ನು ಮುಖ್ಯದ್ವಾರದ ಬಳಿ ಇಡಬಾರದು. ಇದರಿಂದ ಮನೆಯಲ್ಲಿ ಆರ್ಥಿಕ ನಷ್ಟವಾಗುತ್ತದೆ.

ಮನಿಪ್ಲ್ಯಾಂಟ್ ಅನ್ನು ಅಲಂಕಾರಕ್ಕಾಗಿ ಮನೆಯ ಮುಖ್ಯದ್ವಾರದಲ್ಲಿ ಇಡುತ್ತಾರೆ. ವಾಸ್ತು ಪ್ರಕಾರ ಇದನ್ನು ಮಾಡುವುದು ಉತ್ತಮವಲ್ಲ. ಇದನ್ನು ವಾಸ್ತು ಶಾಸ್ತ್ರದಲ್ಲಿ ಉತ್ತಮವೆಂದು ಪರಿಗಣಿಸಲಾಗಿಲ್ಲ.

ಲಕ್ಷ್ಮಿ ದೇವಿಯ ಫೋಟೊವನ್ನು ಮುಖ್ಯದ್ವಾರದಲ್ಲಿ ಹಾಕಬಾರದು. ಇದರಿಂದ ಸಂಪತ್ತು ಮನೆಯಿಂದ ಹೊರಗೆ ಹೋಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರಕ್ಕೆ ವಿಘ್ನವಿನಾಧಕ ಗಣೇಶನ ಪೋಟೊವನ್ನು ಮಾತ್ರ ಹಾಕಿ.

ನಗುವ ಬುದ್ಧನ ವಿಗ್ರಹವನ್ನು ಕೆಲವರು ಮನೆಯ ಹೊರಗೆ ಇಡುತ್ತಾರೆ. ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ಹಾಗಾಗಿ ಬುದ್ಧನನ್ನು ಮನೆಯಲ್ಲಿ ಇರಿಸಿದರೆ ಉತ್ತಮ.

ಇವುಗಳನ್ನು ಮನೆಯಿಂದ ದೂರವಿಡಿ. ಇಲ್ಲವಾದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ

ಮನೆಯ ಮುಖ್ಯ ದ್ವಾರದ ಬಳಿ ಕಸದ ಬುಟ್ಟಿ , ಮುರಿದ ವಸ್ತುಗಳು ಮತ್ತು ಪೊರಕೆಯನ್ನು ಇಡಬೇಡಿ. ಇದರಿಂದ ಲಕ್ಷ್ಮಿ ಕೋಪಗೊಂಡು ಮನೆಗೆ ಪ್ರವೇಶಿಸುವುದಿಲ್ಲ. ಇದರಿಂದ ಮನೆಯಲ್ಲಿ ಆರ್ಥಿಕ ನಷ್ಟ ಕಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...