ನಿಮ್ಮ ಜಾತಕದಲ್ಲಿ ಬುಧಗ್ರಹದ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಬುಧಗ್ರಹ ದೋಷವನ್ನು ನಿವಾರಿಸಲು ಬುಧವಾರದಂದು ಗಣೇಶನನ್ನು ಪೂಜಿಸಿ. ಗಣೇಶನನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ ನೆಲೆಸಿರುತ್ತದೆ.
-ಗಣಪತಿಗೆ ಮೋದಕವೆಂದರೆ ತುಂಬಾ ಇಷ್ಟ. ಹಾಗಾಗಿ ನೀವು ಬುಧವಾರದಂದು ಗಣಪತಿಗೆ ಮೋದಕವನ್ನು ಅರ್ಪಿಸಿದರೆ ಬುಧಗ್ರಹದ ದೋಷ ನಿವಾರಣೆಯಾಗುತ್ತದೆ.
-ನೀವು ಬುಧಗ್ರಹದ ದೋಷವನ್ನು ಹೊಂದಿದ್ದರೆ ರತ್ನದ ಕಲ್ಲನ್ನು ಸಣ್ಣ ಬೆರಳಿನಲ್ಲಿ ಧರಿಸಬೇಕು.
-ಬುಧವಾರ ಹಸುವಿಗೆ ಹಸಿರು ಹುಲ್ಲು ನೀಡುವುದರಿಂದ ಗಣಪತಿಯ ಆಶೀರ್ವಾದ ಸಿಗುತ್ತದೆ. ಇದರಿಂದ ಬುಧದೋಷ ನಿವಾರಣೆಯಾಗುತ್ತದೆ.
-ಗಣಪತಿಗೆ ಬುಧವಾರ ಸಿಂಧೂರವನ್ನು ಅರ್ಪಿಸಿ. ಇದು ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
-ಬುಧವಾರ ದೇವಾಲಯದಲ್ಲಿ ಗಣೇಶನಿಗೆ ಅಭಿಷೇಕ ಮಾಡಿಸಿ ಗರಿಕೆ ಹುಲ್ಲು, ಹಣ್ಣನ್ನು ಅರ್ಪಿಸಿ.
If you have budha dosha please do God Ganesha Puja as mentioned the article