ಹಿಂದೂ ಧರ್ಮದಲ್ಲಿ ಗರುಡ ಪುರಾಣವನ್ನು ಮಹಾ ಪುರಾಣ ಎಂದು ಪರಿಗಣಿಸಲಾಗುತ್ತದೆ. ಇದು ಸಾವಿನ ನಂತರ ದೇಹದಿಂದ ಬೇರ್ಪಟ್ಟ ಆತ್ಮದ ಪ್ರಯಾಣದ ಬಗ್ಗೆ, ಯಶಸ್ವಿ ಮತ್ತು ಸಂತೋಷದ ಜೀವನದ ಬಗ್ಗೆ ಹೇಳುತ್ತದೆ. ಹಾಗೇ ಜೀವನದಲ್ಲಿ ಕಷ್ಟಗಳು, ಹಣದ ಕೊರತೆ ತರುವಂತಹ ವಿಷಯಗಳನ್ನು ಕೂಡ ತಿಳಿಸುತ್ತದೆ. ಹಾಗಾಗಿ ಗರುಡ ಪುರಾಣದ ಪ್ರಕಾರ ತಪ್ಪಾದ ಸಮಯದಲ್ಲಿ ನಾವು ಮಾಡುವಂತಹ ಈ ಕೆಲಸ ಕುಟುಂಬಕ್ಕೆ ತೊಂದರೆಯನ್ನುಂಟುಮಾಡುತ್ತದೆಯಂತೆ.
ಗರುಡ ಪುರಾಣದ ಪ್ರಕಾರ, ರಾತ್ರಿ ಉಗುರುಗಳನ್ನು ಎಂದಿಗೂ ಕತ್ತರಿಸಬಾರದು. ಇದನ್ನು ಮಾಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆಯಂತೆ. ರಾತ್ರಿ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಗಳಲ್ಲಿ ವಾಸಿಸುತ್ತಾಳಂತೆ. ಹಾಗಾಗಿ ಕೊಳಕು ಕೆಲಸ ಮಾಡಿದರೆ ಆಕೆ ಮನೆಬಿಟ್ಟು ಹೋಗುತ್ತಾಳೆ.
ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಆದರೆ ಸಂಜೆಯ ವೇಳೆ ತುಳಸಿಗೆ ನೀರು ಹಾಕಿದರೆ ವಾಸ್ತು ದೋಷವನ್ನು ಉಂಟುಮಾಡುತ್ತದೆಯಂತೆ.
ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಕೂದಲನ್ನು ಕತ್ತರಿಸಬಾರದು. ಇದರಿಂದ ದಟ್ಟ ದಾರಿದ್ರ್ಯ ಮನೆಯನ್ನು ಆವರಿಸುತ್ತದೆಯಂತೆ.
ಸೂರ್ಯಾಸ್ತದ ನಂತರ ಯಾರಿಗೂ ಮೊಸರು, ಮಜ್ಜಿಗೆಯಂತಹ ಹುಳಿ ಪದಾರ್ಥಗಳನ್ನು ನೀಡಬೇಡಿ. ಮತ್ತು ಉಪ್ಪು ರಾತ್ರಿ ಸೇವಿಸಬೇಡಿ. ಇದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆಯಂತೆ.
ನಿಮ್ಮ ಮಗುವು ಹೆಚ್ಚು ಆತಂಕಕ್ಕೊಳಗಾಗಿದೆಯೇ? ಈ ಸೂಚನೆಗಳ ಮೂಲಕ ತಿಳಿಯಿರಿ
ಸೂರ್ಯಾಸ್ತದ ಸಮಯದಲ್ಲಿ ಮನೆಯನ್ನು ಗುಡಿಸಬೇಡಿ. ಇದರಿಂದ ಮನೆಗೆ ಬಡತನ ಆವರಿಸುತ್ತದೆಯಂತೆ. ಹಾಗಾಗಿ ಇದನ್ನು ಸೂರ್ಯಾಸ್ತದ ಮೊದಲೇ ಮಾಡಬೇಕು.