Kannada Duniya

ಸಾಲದ ಹೊರೆಯಿಂದ ಮುಕ್ತಿ ಪಡೆಯಲು ಈ ಪರಿಹಾರವನ್ನು ಮಾಡಿ

ಜನರಿಗೆ ತಾವು ದುಡಿದ ಹಣ ಸಾಲದಿದ್ದಾಗ ಸಾಲದ ಮೊರೆ ಹೋಗುತ್ತಾರೆ. ಇದರಿಂದ ಅವರು ಸಾಲದ ಭಾದೆಯಿಂದ ನರಳುವಂತಾಗುತ್ತದೆ. ಹಾಗಾಗಿ ಈ ಸಾಲದ ಹೊರೆಯಿಂದ ನೀವು ಮುಕ್ತರಾಗಲು ಜ್ಯೋತಿಷ್ಯದ ಕೆಲವು ಪರಿಹಾರಗಳನ್ನು ಮಾಡಿ. ಇದರಿಂದ ಸಾಲದ ಹೊರೆ ಕಡಿಮೆಯಾಗುತ್ತದೆ.

ನಿಮ್ಮ ಜೀವನದ ಸಾಲದ ಹೊರೆ ಹೆಚ್ಚಾಗಿದ್ದರೆ ಅದನ್ನು ನಿವಾರಿಸಲು ಬಾವಿಯಿಂದ ನೀರನ್ನು ಎತ್ತಿ ಅರಳೀಮರಕ್ಕೆ ಅರ್ಪಿಸಿ. ಇದನ್ನು ಸತತ 6 ಶನಿವಾರಗಳ ಕಾಲ ಮಾಡಿ. ಆದರೆ ಇದನ್ನು ಯಾರಿಗೂ ತಿಳಿಯದಂತೆ ಮಾಡಬೇಕು.

ಹಾಗೇ ಶುಕ್ರವಾರದಂದು ಸಂಪತ್ತಿನ ದೇವಿಯಾದ ಲಕ್ಷ್ಮಿದೇವಿಯ ದೇವಸ್ಥಾನದಲ್ಲಿ ಪೊರಕೆಯನ್ನು ದಾನ ಮಾಡಬೇಕು. ಇದರಿಂದ ಲಕ್ಷ್ಮಿದೇವಿ ಸಂತೋಷಗೊಂಡು ನಿಮ್ಮ ಆರ್ಥಿಕ ಸಮಸ್ಯೆಯನ್ನು ನಿವಾರಿಸುತ್ತಾಳೆ.

ಇದಲ್ಲದೇ ನಿಮ್ಮ ಋಣಭಾರವನ್ನು ಕಡಿಮೆ ಮಾಡಲು ಪೂಜೆಯ ಸಮಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. ಇದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ಸಾಲದ ಹೊರೆ ಕಡಿಮೆಯಾಗುತ್ತದೆ.

ಹಾಗೇ ಸಾಲದಿಂದ ಮುಕ್ತಿ ಪಡೆಯಲು ನವಗ್ರಹಗಳ ಪೂಜೆ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...