Kannada Duniya

ಕೆಲಸ ಕಳೆದುಕೊಳ್ಳುವ ಭಯವಿದ್ದರೆ ತುಳಸಿಯ ಈ ಪರಿಹಾರ ಮಾಡಿ

ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದು ಅನೇಕ ವಾಸ್ತು ದೋಷವನ್ನು ತೆಗೆದುಹಾಕುತ್ತದೆ. ಮನೆಯಲ್ಲಿ ಸಕರಾತ್ಮಕತೆಯನ್ನು ತರುತ್ತದೆ. ತುಳಸಿ ಗಿಡದ ಮೂಲಕ ಕೆಲವು ಪರಿಹಾರಗಳನ್ನು ಮಾಡಿಕೊಂಡರೆ ವೃತ್ತಿ ಜೀವನಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ಕೆಲಸದಲ್ಲಿ ಬಡ್ತಿ ಸಿಗುತ್ತದೆ.

ಬಡತನವನ್ನು ಹೋಗಲಾಡಿಸಲು ಹಣದ ಕೊರತೆಯನ್ನು ಎದುರಿಸುತ್ತಿರುವ ಜನರು, ತುಳಸಿ ಗಿಡದ ಬೇರನ್ನು ಬೆಳ್ಳಿಯ ಲಾಕೆಟ್ ನಲ್ಲಿಟ್ಟು ಕುತ್ತಿಗೆಗೆ ಧರಿಸಿದರೆ ಬಹಳ ಪ್ರಯೋಜನಕಾರಿ. ತುಳಸಿ ಗಿಡವು ನವಗ್ರಹ ದೋಷವನ್ನು ತೆಗೆದು ಹಾಕುವ ಮೂಲಕ ಅದೃಷ್ಟವನ್ನು ತರುತ್ತದೆ. ಇದರಿಂದ ಬಡತನ ದೂರವಾಗುತ್ತದೆ.

ಹಣದ ಕೊರತೆಯನ್ನು ನೀಗಿಸಲು ಗುರುವಾರ ಮತ್ತು ಏಕಾದಶಿಯಂದು ತುಳಸಿ ಗಿಡವನ್ನು ಪೂಜಿಸಿ ಅದರ ಎಲೆಯನ್ನು ಪರ್ಸ್ ನಲ್ಲಿ ಇರಿಸಿ. ಹಾಗೇ ವ್ಯಾಪಾರದಲ್ಲಿ ಅಭಿವೃದ್ದಿ ಹೊಂದಲು 3 ದಿನಗಳ ಕಾಲ ತುಳಸಿ ಎಲೆಗಳನ್ನು ನೀರಿನಲ್ಲಿ ಇಟ್ಟುಕೊಂಡು ಬಳಿಕ ಆ ನೀರನ್ನು ಬಾಗಿಲಿಗೆ ಸಿಂಪಡಿಸಿ. ಇದರಿಂದ ನಿಮ್ಮ ವ್ಯಾಪಾರ ಉತ್ತಮವಾಗಿ ನಡೆಯುತ್ತದೆ.

ಮನೆಯ ಈ ವಾಸ್ತು ಸರಿಯಾಗಿದ್ದರೆ ನಿಮ್ಮ ಅದೃಷ್ಟ ಬದಲಾಗುತ್ತದೆಯಂತೆ

ಉದ್ಯೋಗವನ್ನು ಕಳೆದುಕೊಳ್ಳುವ ಭಯದಲ್ಲಿರುವವರು ತುಳಸಿ ಎಲೆಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ಗುರುವಾರ ಇಟ್ಟುಕೊಳ್ಳಿ. ಅಲ್ಲದೇ ಸೋಮವಾರ 16 ತುಳಸಿ ಬೀಜಗಳನ್ನು ಬಟ್ಟೆಯಲ್ಲಿ ಕಟ್ಟಿ ಕಚೇರಿಯ ಮಣ್ಣಿನಲ್ಲಿ ಹೂತುಹಾಕಿ. ಇದರಿಂದ ನಿಮ್ಮ ಕೆಲಸ ಉಳಿಯುವುದಲ್ಲದೇ ಬಡ್ತಿ ಕೂಡ ಸಿಗುತ್ತದೆ.

 

If you are fearing job loss,do this with Tulasi to ensure job security


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...