Kannada Duniya

ನೀವು ಮನೆಯನ್ನು ಪ್ರವೇಶಿಸಿದ ತಕ್ಷಣ ಇದನ್ನು ನೋಡಿದರೆ ವಾಸ್ತು ದೋಷ ಉಂಟಾಗುತ್ತದೆಯಂತೆ!

ಹಿಂದೂಧರ್ಮದಲ್ಲಿ ಶಾಸ್ತ್ರಗಳಿಗೆ ಹೆಚ್ಚಿನ ಮಹತ್ವವಿದೆ. ಮನೆಯಲ್ಲಿ ವಾಸ್ತುದೋಷವಿದ್ದರೆ ವ್ಯಕ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಹಾಗಾಗಿ ನಿಮ್ಮ ಮನೆಗೆ ವಾಸ್ತು ದೋಷ ಉಂಟಾಗಬಾರದು ಎಂದಾದರೆ ಮನೆಗೆ ಪ್ರವೇಶಿಸಿದ ತಕ್ಷಣ ಇವುಗಳನ್ನು ನೋಡಬೇಡಿ.

ಹಿಂದೂಧರ್ಮದಲ್ಲಿ ಪೊರಕೆಗೆ ವಿಶೇಷ ಸ್ಥಾನವಿದೆ. ಪೊರಕೆಯನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಆದರೆ ಪೊರಕೆಯನ್ನು ಎಲ್ಲರಿಗೂ ಕಾಣುವಂತೆ ಇಡಬಾರದು. ಮನೆಗೆ ಪ್ರವೇಶಿಸಿದ ತಕ್ಷಣ ಪೊರಕೆ ಕಣ್ಣಿಗೆ ಬಿದ್ದರೆ ವಾಸ್ತು ದೋಷ ಉಂಟಾಗುತ್ತದೆಯಂತೆ.

ಹಾಗೇ ನೀವು ಮನೆಗೆ ಪ್ರವೇಶಿಸಿದ ತಕ್ಷಣ ಅಡುಗೆ ಮನೆಯಲ್ಲಿ ಬಳಸುವ ಸಿಲಿಂಡರ್ ಕಣ್ಣಿಗೆ ಬೀಳಬಾರದು. ಇದರಿಂದ ವಾಸ್ತು ದೋಷ ಉಂಟಾಗುತ್ತದೆಯಂತೆ. ಅಲ್ಲದೇ ಮನೆ ಪ್ರವೇಶಿಸುವಾಗ ಚಪ್ಪಲಿಗಳು ಕಣ್ಣಿಗೆ ಕಾಣಬಾರದು. ಹಾಗಾಗಿ ಚಪ್ಪಲಿಗಳನ್ನು ಮನೆಯೊಳಗೆ ಇಡಬಾರದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...