Kannada Duniya

ಸಂಕ್ರಾಂತಿಯ ದಿನ ಈ ಕೆಲಸ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ….!

ಜನವರಿ 15 ರಂದು ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಮಕರ ರಾಶಿಯ ಅಧಿಪತಿ ಶನಿಯಾಗಿರುವುದರಿಂದ ಸೂರ್ಯ-ಶನಿಯ ಸಂಯೋಗದ ಶುಭ ದಿನದಂದು ನೀವು ಕೆಲವು ಕ್ರಮಗಳನ್ನು ಕೈಗೊಂಡರೆ ಶನಿ ದೋಷದಿಂದ ಮುಕ್ತಿ ಪಡೆಯಬಹುದು.

ಶಾಸ್ತ್ರದ ಪ್ರಕಾರ ಶನಿಯ ತಂದೆ ಸೂರ್ಯ. ಹಾಗಾಗಿ ಶನಿಯ ಮನೆಯಾದ ಮಕರ ರಾಶಿಗೆ ಪ್ರವೇಶಿಸುತ್ತಿರುವ ತಂದೆಯನ್ನು ಶನಿಯು ಕಪ್ಪು ಎಳ್ಳು ಬೀಜದೊಂದಿಗೆ ಸ್ವಾಗತಿಸಿದನು. ಇದರಿಂದ ಸೂರ್ಯನಿಗೆ ಸಂತೋಷವಾಯಿತು. ಹಾಗಾಗಿ ಈ ದಿನ ನೀವು ಬೆಳಿಗ್ಗೆ ಸ್ನಾನ ಮಾಡಿದ ಬಳಿಕ ಸೂರ್ಯನಿಗೆ ಎಳ್ಳನ್ನು ಬೆರೆಸಿದ ನೀರನ್ನು ಅರ್ಪಿಸಿದರೆ ನಿಮ್ಮ ಮನೆಯಲ್ಲಿ ಧನ ಧಾನ್ಯ ತುಂಬಿರುತ್ತದೆಯಂತೆ.

ನಂತರ ಶನಿದೇವನನ್ನು ಪೂಜಿಸಿ. ಪೂಜೆಯಲ್ಲಿ ಶನಿದೇವನಿಗೆ ಕಪ್ಪು ಎಳ್ಳನ್ನು ಅರ್ಪಿಸಿ. ಪೂಜೆಯ ನಂತರ ಬಡವರಿಗೆ, ನಿರ್ಗತಿಕರಿಗೆ ಸಾಸಿವೆ ಎಣ್ಣೆ, ಕಪ್ಪು ಎಳ್ಳು, ಎಳ್ಳಿನ ಲಡ್ಡು, ಬಟ್ಟೆಗಳು ಇತ್ಯಾದಿಗಳನ್ನು ದಾನ ಮಾಡಿ. ಹಾಗೇ ಈ ದಿನ ಅನ್ನದಾನ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಶನಿದೇವ ಸಂತೋಷಗೊಳ್ಳುತ್ತಾನೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...