ಶ್ರೀರಾಮನನ್ನು ಜಪಿಸುವುದರಿಂದ ಜೀವನದಲ್ಲಿ ಎದುರಾದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಶ್ರೀರಾಮನ ಜಪ ಮಾಡುವುದರಿಂದ ಹನುಮಂತನ ಕೃಪೆಯು ದೊರೆಯುತ್ತದೆ ಎನ್ನಲಾಗುತ್ತದೆ. ಹಾಗಾಗಿ ಮನೆಯಲ್ಲಿ ಶ್ರೀರಾಮನ ಫೋಟೊವನ್ನು ಇಡುವವರು ಈ ನಿಯಮ ಪಾಲಿಸಿ.
ಮನೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕದ ಫೋಟೊವನ್ನು ಹಾಕಿದರೆ ಒಳ್ಳೆಯದು. ಇದರಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಜೊತೆಯಾಗಿರುತ್ತಾರೆ. ಇದನ್ನು ಮನೆಯಲ್ಲಿ ಇಡುವುದರಿಂದ ಮನೆಯ ಸದಸ್ಯರಲ್ಲಿ ಸಕರಾತ್ಮಕ ಭಾವನೆ ಮೂಡುತ್ತದೆ. ಕುಟುಂಬದಲ್ಲಿ ವಾತ್ಸಲ್ಯ ಹೆಚ್ಚಾಗುತ್ತದೆ. ಇದನ್ನು ಪೂಜಿಸುವುದರಿಮದ ನಿಮ್ಮಗೆ ಅದೃಷ್ಟ ಕೂಡಿ ಬರುತ್ತದೆ.
ಹಾಗಾಗಿ ಈ ಫೋಟೊವನ್ನು ಮನೆಯಲ್ಲಿ ಪೂಜಾ ಕೋಣೆಯಲ್ಲಿ ಇಡಿ. ಇದನ್ನು ಮನೆಯ ಪೂರ್ವ ದಿಕ್ಕಿಗೆ ಮುಖ ಮಾಡಿ ಇಡುವುದು ಉತ್ತಮ. ಇದರಿಂದ ನೀವು ಜೀವನದಲ್ಲಿ ಏಳಿಗೆ ಕಾಣುತ್ತೀರಿ. ಮನೆಯಲ್ಲಿ ನಕರಾತ್ಮಕ ಶಕ್ತಿ ದೂರವಾಗುತ್ತದೆ.