ಶನಿವಾರದಂದು ಶನಿದೇವನನ್ನು ಪೂಜಿಸಲಾಗುತ್ತದೆ. ಕೆಲವರು ಶನಿದೇವನ ಅನುಗ್ರಹ ಪಡೆಯಲು ಶನಿವಾರದಂದು ಶನಿದೇವನ ದೇವಾಲಯಗಳಿಗೆ ತೆರಳಿ ಪೂಜೆ ಮಾಡುತ್ತಾರೆ. ಮತ್ತು ಶಮಿ ವೃಕ್ಷಕ್ಕೆ ಸಾಸಿವೆ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚುತ್ತಾರೆ. ಇದರಿಂದ ಶನಿದೇವ ಸಮಾಧಾನಗೊಳ್ಳುತ್ತಾನೆ ಎಂಬುದು ಅವರ ನಂಬಿಕೆ. ಅದರ ಜೊತೆಗೆ ಶನಿವಾರದಂದು ಈ ಕೆಲಸಗಳನ್ನು ಮಾಡಿದರೆ ಶನಿದೇವನ ಅನುಗ್ರಹ ದೊರೆಯುತ್ತದೆ. ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ.
-ಶನಿವಾರದಂದು ಎಳ್ಳುದಾನ ಮಾಡಿ. ಇದರಿಂದ ನಿಮ್ಮ ದುಃಖ, ದೌರ್ಭಾಗ್ಯ ದೂರವಾಗುತ್ತದೆ.
-ಲವಂಗ ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.
-ಕಬ್ಬಿಣ ದಾನ ಮಾಡುವುದರಿಂದ ಆರ್ಥಿಕ ನಷ್ಟ ಕಡಿಮೆಯಾಗುತ್ತದೆ.
-ಕನ್ನಡಕ ಅಥವಾ ಕಾಡಿಗೆ(ಕಾಜಲ್) ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.
ಶನಿ-ರಾಹುವಿನ ಅಪಾಯಕಾರಿ ಸಂಯೋಜನೆಯು ಈ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ….!
-ಕಪ್ಪು ಕಂಬಳಿ ದಾನ ಮಾಡಿದರೆ ಸಾಮಾಜಿಕ ಸ್ಥಾನಮಾನ ಸಿಗುತ್ತದೆ.
-ಉದ್ದಿನ ಕಾಳನ್ನು ದಾನ ಮಾಡಿದರೆ ಅನಾರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.
-ನೀಲಮಣಿ ಗಳನ್ನು ದಾನ ಮಾಡಿದರೆ ವಿವಾದಗಳು, ನ್ಯಾಯಾಲಯದ ವಿಚಾರ ಬಗೆಹರಿಯುತ್ತದೆ.
-ಶನಿವಾರ ಕಪ್ಪು ಬೂಟುಗಳನ್ನು ದಾನ ಮಾಢಿದರೆ ಅಪಘಾತದಿಂದ ರಕ್ಷಣೆ ಸಿಗುತ್ತದೆ.
-ಶನಿವಾರ ತೆಂಗಿನಕಾಯಿ ಅರ್ಪಿಸಿದರೆ ಮಕ್ಕಳ ಕಷ್ಟಗಳು ನಿವಾರಣೆಯಾಗುತ್ತದೆ.