Kannada Duniya

ಶನಿವಾರದಂದು ಈ ಕೆಲಸ ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ…!

ಶನಿವಾರದಂದು ಶನಿದೇವನನ್ನು ಪೂಜಿಸಲಾಗುತ್ತದೆ. ಕೆಲವರು ಶನಿದೇವನ ಅನುಗ್ರಹ ಪಡೆಯಲು ಶನಿವಾರದಂದು ಶನಿದೇವನ ದೇವಾಲಯಗಳಿಗೆ ತೆರಳಿ ಪೂಜೆ ಮಾಡುತ್ತಾರೆ. ಮತ್ತು ಶಮಿ ವೃಕ್ಷಕ್ಕೆ ಸಾಸಿವೆ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚುತ್ತಾರೆ. ಇದರಿಂದ ಶನಿದೇವ ಸಮಾಧಾನಗೊಳ್ಳುತ್ತಾನೆ ಎಂಬುದು ಅವರ ನಂಬಿಕೆ. ಅದರ ಜೊತೆಗೆ ಶನಿವಾರದಂದು ಈ ಕೆಲಸಗಳನ್ನು ಮಾಡಿದರೆ ಶನಿದೇವನ ಅನುಗ್ರಹ ದೊರೆಯುತ್ತದೆ. ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ.

-ಶನಿವಾರದಂದು ಎಳ್ಳುದಾನ ಮಾಡಿ. ಇದರಿಂದ ನಿಮ್ಮ ದುಃಖ, ದೌರ್ಭಾಗ್ಯ ದೂರವಾಗುತ್ತದೆ.

-ಲವಂಗ ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.

-ಕಬ್ಬಿಣ ದಾನ ಮಾಡುವುದರಿಂದ ಆರ್ಥಿಕ ನಷ್ಟ ಕಡಿಮೆಯಾಗುತ್ತದೆ.

-ಕನ್ನಡಕ ಅಥವಾ ಕಾಡಿಗೆ(ಕಾಜಲ್) ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.

ಶನಿ-ರಾಹುವಿನ ಅಪಾಯಕಾರಿ ಸಂಯೋಜನೆಯು ಈ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ….!

-ಕಪ್ಪು ಕಂಬಳಿ ದಾನ ಮಾಡಿದರೆ ಸಾಮಾಜಿಕ ಸ್ಥಾನಮಾನ ಸಿಗುತ್ತದೆ.

-ಉದ್ದಿನ ಕಾಳನ್ನು ದಾನ ಮಾಡಿದರೆ ಅನಾರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.

-ನೀಲಮಣಿ ಗಳನ್ನು ದಾನ ಮಾಡಿದರೆ ವಿವಾದಗಳು, ನ್ಯಾಯಾಲಯದ ವಿಚಾರ ಬಗೆಹರಿಯುತ್ತದೆ.

-ಶನಿವಾರ ಕಪ್ಪು ಬೂಟುಗಳನ್ನು ದಾನ ಮಾಢಿದರೆ ಅಪಘಾತದಿಂದ ರಕ್ಷಣೆ ಸಿಗುತ್ತದೆ.

-ಶನಿವಾರ ತೆಂಗಿನಕಾಯಿ ಅರ್ಪಿಸಿದರೆ ಮಕ್ಕಳ ಕಷ್ಟಗಳು ನಿವಾರಣೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...