ವಿಜಯದಶಮಿಯ ದಿನ ರಾಮನು ರಾವಣನನ್ನು ಕೊಂದನು ಎಂಬ ಪ್ರತೀತಿ ಇದೆ. ಹಾಗಾಗಿ ವಿಜಯದಶಮಿಯನ್ನು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿನ ಶಮೀ ವೃಕ್ಷವನ್ನು ಪೂಜಿಸಿದರೆ ಒಳ್ಳೆಯದಂತೆ.
ಕೆಲವು ಕಡೆ ವಿಜಯದಶಮಿಯದಿನ ರಾವಣನ ದಹನದ ನಂತರ ಶಮೀ ವೃಕ್ಷದ ಎಲೆಗಳನ್ನು ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಹಂಚುವ ಪದ್ಧತಿ ಇದೆ. ಯಾಕೆಂದರೆ ರಾಮನು ರಾವಣದ ಸಂಹಾರಕ್ಕೂ ಮುನ್ನ ದುರ್ಗೆ ಮತ್ತು ಶಮೀವೃಕ್ಷವನ್ನು ಪೂಜಿಸಿದ್ದಾನೆ ಎಂಬ ನಂಬಿಕೆ ಇದೆ.
ವಿಜಯದಶಮಿಯ ದಿನ ಈ ಪಕ್ಷಿಯ ದರ್ಶನ ಮಾಡಿದರೆ ಮಂಗಳಕರವಂತೆ….!
ಹಾಗಾಗಿ ವಿಜಯದಶಮಿಯ ಪ್ರದೋಷ ಕಾಲದಲ್ಲಿ ಶಮಿ ವೃಕ್ಷವನ್ನು ಪೂಜಿಸುವುದರಿಂದ ಆರೋಗ್ಯ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆಯಂತೆ. ಈ ದಿನ ಶಮೀವೃಕ್ಷದ ಎಲೆಗಳನ್ನು ನೀಡುವುದರಿಂದ ಸಂತೋಷ ಸಮೃದ್ಧಿ ಲಭಿಸುತ್ತದೆಯಂತೆ.