ಹಿಂದೂಧರ್ಮದಲ್ಲಿ ಪೂಜೆಯ ಸಮಯದಲ್ಲಿ ದೇವರ ಮುಂದೆ ಧೂಪವನ್ನು ಸುಡುವುದಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ದೇವರಿಗೆ ಪ್ರತಿದಿನ ಧೂಪವನ್ನು ಹಚ್ಚುತ್ತಾರೆ. ಇದರಿಂದ ದೇವರ ಅನುಗ್ರಹ ದೊರೆತು ಜೀವನದಲ್ಲಿರುವ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಮನೆಯಲ್ಲಿ ಧೂಪದಿಂದ ಈ ಕೆಲಸ ಮಾಡಿ.
ಹಸುವಿನ ಸಗಣಿಯಿಂದ ತಯಾರಿಸಿದ ರೊಟ್ಟಿಯಲ್ಲಿ ಬೆಂಕಿ ಹಚ್ಚಿ ಸುಗಂಧ ದ್ರವ್ಯವನ್ನು ಹಾಕಿ. ಇದನ್ನು ಮನೆಯಲ್ಲೆಲ್ಲಾ ಹರಡಿಸಿ. ಇದರಿಂದ ಮನೆಯಲ್ಲಿರುವ ನಕರಾತ್ಮಕಶಕ್ತಿ ದೂರವಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ.
ಬೆಂಕಿಯಲ್ಲಿ ಸುಗಂಧದ್ರವ್ಯ, ಕರ್ಪೂರ, ದೇಸಿ ತುಪ್ಪ ಮತ್ತು ಶ್ರೀಗಂಧವನ್ನು ಹಾಕಿ ಹೊಗೆಯನ್ನು ಮನೆಯಲ್ಲಿ ಪ್ರತಿ ಕೋಣೆಯಲ್ಲೂ ಹಿಡಿಯಿರಿ. ಇದರಿಂದ ಮನೆಯಲ್ಲಿರುವ ನಕರಾತ್ಕ ಶಕ್ತಿ ಹೊರಗೆ ಓಡುತ್ತದೆ.
ಭಾನುವಾರ ಅಥವಾ ಗುರುವಾರದಂದು ಸುಗಂಧದ್ರವ್ಯ, ಬೆಲ್ಲ ಮತ್ತು ತುಪ್ಪದ ಮಿಶ್ರಣವನ್ನು ಮನೆಯಲ್ಲಿ ಸುಟ್ಟು ಹಾಕಿ. ಇದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ.
ಕೃಷ್ಣಜನ್ಮಾಷ್ಟಮಿಯ ದಿನ ಈ ವಸ್ತುಗಳನ್ನು ಮನೆಗೆ ತಂದರೆ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆಯಂತೆ…!
ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಲಿನಲ್ಲಿ ಬಿಸಿ ಮಾಡಿ. ನಂತರ ಸಂಜೆ ಮಾವಿನ ಕಟ್ಟಿಗೆ ಮತ್ತು ಹಸುವಿನ ಸಗಣಿ ರೊಟ್ಟಿಯನ್ನು ಹಾಕಿ ಸುಡಬೇಕು. ಅದಕ್ಕೆ ಈ ಎಣ್ಣೆಯನ್ನು ಹಾಕಿ ಹೊಗೆ ಹಾಕಿದರೆ ಮನೆಯಲ್ಲಿರುವ ವಾಸ್ತುದೋಷ ನಿವಾರಣೆಯಾಗುತ್ತದೆ.