ಜನರು ತಮ್ಮಗಿಂತ ಹೆಚ್ಚು ಏಳಿಗೆ ಕಾಣುವವರನ್ನು ತುಳಿಯಲು ಮುಂದಾಗುತ್ತಾರೆ. ಅದಕ್ಕಾಗಿ ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅದರಲ್ಲಿ ವಾಮಾಚಾರ ಕೂಡ ಒಂದು. ಇದನ್ನು ನಕರಾತ್ಮಕ ಶಕ್ತಿಗಳ ಮೂಲಕ ಮಾಡುವುದರಿಂದ ನಿಮ್ಮ ಮನೆ ಮತ್ತು ಅಂಗಡಿಯ ಮೇಲೆ ಇದರ ಪ್ರಯೋಗವಾಗಿದ್ದರೆ ಅಲ್ಲಿ ಏಳಿಗೆ ಕಂಡುಬರುವುದಿಲ್ಲ. ಹಾಗಾಗಿ ಅದನ್ನು ಕಂಡುಹಿಡಿಯಲು ಈ ಕ್ರಮ ಪಾಲಿಸಿ.
ನಿಮ್ಮ ಮನೆ ಮತ್ತು ಅಂಗಡಿಯಲ್ಲಿ ವಾಮಾಚಾರ ಮಾಡಿದ್ದರೆ ಅದನ್ನು ತಿಳಿಯಲು ಪಾಲಕ್ ಸೊಪ್ಪನ್ನು ಬಳಸಬಹುದು. ಹೆಚ್ಚಾಗಿ ಪಾಲಕ್ ಸೊಪ್ಪನ್ನು ಅಡುಗೆಯಲ್ಲಿ ಬಳಸುತ್ತಾರೆ. ಮತ್ತು ರಕ್ತಹೀನತೆ ಸಮಸ್ಯೆ ಇರುವವರು ಹೆಚ್ಚು ಸೇವಿಸುತ್ತಾರೆ. ಯಾಕೆಂದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆದರೆ ನಿಮ್ಮ ಮನೆ ಮತ್ತು ಅಂಗಡಿಯಲ್ಲಿ ವಾಮಾಚಾರ ಮಾಡಿರುವ ಶಂಕೆ ಇದ್ದರೆ ಅದನ್ನು ತಿಳಿಯಲು ಮೂರು ಕಟ್ಟು ಪಾಲಕ್ ಸೊಪ್ಪನ್ನು ಮಂಗಳವಾರ ಅಥವಾ ಶನಿವಾರದಂದು ಸಂಜೆ ಮನೆ ಮತ್ತು ಅಂಗಡಿಯ ಮುಂದೆ ಸಂಪೂರ್ಣವಾಗಿ ನಿವಾಳಿಸಿ ಅದನ್ನು ಹಸುವಿಗೆ ತಿನ್ನಿಸಿ. ಹಸು ಇದನ್ನು ಸೇವಿಸಿದರೆ ನೀವು ವಾಮಾಚಾರದಿಂದ ಮುಕ್ತರಾಗುತ್ತೀರಿ, ಒಂದು ವೇಳೆ ಹಸು ತಿಂದಿಲ್ಲವಾದರೆ ಅಲ್ಲಿ ವಾಮಾಚಾರ ನಡೆದಿದೆ ಎಂಬುದನ್ನು ತಿಳಿಯಿರಿ.