ಮನೆಯಲ್ಲಿ ವಾಸ್ತುದೋಷವಿದ್ದಾಗ ಕುಟುಂಬ ಸದಸ್ಯರಲ್ಲಿ ದ್ವೇಷ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಏರುಪೇರಾಗುತ್ತದೆ. ಕೋರ್ಟ್ ಕೇಸ್ ಗಳಲ್ಲಿ ಸಿಕ್ಕಿಬೀಳುತ್ತೀರಿ. ಹಾಗಾಗಿ ಮನೆಗೆ ಕೆಲವು ವಸ್ತುಗಳನ್ನು ತರಬಾರದು. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಕತ್ತಿ, ಚಾಕು, ಈಟಿ, ಬಂದೂಕು, ಫಿರಂಗಿ ಮುಂತಾದ ಅಪಾಯಕಾರಿ ಆಯುಧಗಳ ಚಿತ್ರಗಳನ್ನು ಹಾಕಬೇಡಿ. ಇದು ಮನಸ್ಸಿನಲ್ಲಿ ಹಿಂಸಾತ್ಮಕ ಆಲೋಚನೆಗಳಿಗೆ ಕಾರಣವಾಗುತ್ತದೆ. ಇದರಿಂದ ಕುಟುಂಬದಲ್ಲಿ ಶಾಂತಿ ಕದಡುತ್ತದೆ, ಸಂಕಷ್ಟ ಹೆಚ್ಚಾಗುತ್ತದೆ.
ಕೆಲವರು ಮನೆಯ ಸೌಂದರ್ಯಕ್ಕಾಗಿ ತಾಜ್ ಮಹಲ್ ಚಿತ್ರವನ್ನು ಹಾಕುತ್ತಾರೆ. ಆದರೆ ಹೀಗೆ ಮಾಡಬಾರದು. ತಾಜ್ ಮಹಲ್ ಒಂದು ಸಮಾಧಿಯಾಗಿದೆ. ಶಾಸ್ತ್ರದ ಪ್ರಕಾರ ಇದು ನಕರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಈ ಸಾಲು ನಿಮ್ಮ ಕೈಯಲ್ಲಿದ್ದರೆ ಶ್ರೀಮಂತ ಮನೆತನದ ಹುಡುಗಿಯನ್ನು ಮದುವೆಯಾಗುತ್ತೀರಂತೆ…!
ಮಹಾಭಾರತಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಹಾಕಬೇಡಿ. ಯಾಕೆಂದರೆ ಇದು ಒಂದು ಕೌಟುಂಬಿಕ ಯುದ್ಧವಾಗಿದೆ. ಇದರಿಂದ ಕುಟುಂಬದಲ್ಲಿ ಸಂಘರ್ಷ ಹೆಚ್ಚಾಗುತ್ತದೆ.
ಹಾಗೇ ಮನೆಯಲ್ಲಿ ಕಾರಂಜಿ, ಹೋಟೆಲ್, ಶಾಲೆ, ಆಸ್ಪತ್ರೆಯ ಚಿತ್ರವನ್ನು ಎಂದಿಗೂ ಹಾಕಬಾರದು. ವಾಸ್ತು ಪ್ರಕಾರ ಇದು ಖರ್ಚುಗಳನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಸಂತೋಷ ಹಾಳಾಗುತ್ತದೆ.