Kannada Duniya

ಕೆಟ್ಟ ಕೆಲಸಗಳು ಮಾತ್ರವಲ್ಲ ಒಳ್ಳೆಯ ಕಾರ್ಯಗಳು ಕೂಡ ಜೀವನದಲ್ಲಿ ಬಿಕ್ಕಟ್ಟನ್ನು ತರುತ್ತವೆ…!

ಗರುಡ ಪುರಾಣದಲ್ಲಿ ಜೀವನದಲ್ಲಿ ಸರಿಯಾದ ವಿಧಾನದಲ್ಲಿ ಸರಿಯಾದ ಸಮಯದಲ್ಲಿ ಎಲ್ಲವನ್ನೂ ಮಾಡುವಂತೆ ಹೇಳಲಾಗುತ್ತದೆ. ಇದರಿಂದ ವ್ಯಕ್ತಿ ತೊಂದರೆಗಳಿಂದ ಪಾರಾಗುತ್ತಾನೆ. ಗರುಡ ಪುರಾಣದಲ್ಲಿ ತಿಳಿಸಿದಂತೆ ಕೆಟ್ಟ ಕೆಲಸ ಮಾಡಿದರೆ ಮಾತ್ರವಲ್ಲ ಈ ಒಳ್ಳೆಯ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಮಾಡದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆಯಂತೆ.

ಪ್ರತಿದಿನ ತುಳಸಿಗೆ ನೀರು ಹಾಕುವುದು ಉತ್ತಮ ಕೆಲಸವೇ. ಆದರೆ ಸಂಜೆಯ ಸಮಯದಲ್ಲಿ ಮಾತ್ರ ತುಳಸಿಗೆ ನೀರು ಹಾಕಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.

ಮನೆಯಲ್ಲಿ ಪೊರಕೆಯಿಂದ ಗುಡಿಸುವುದು ಒಳ್ಳೆಯ ಕೆಲಸ . ಇದರಿಂದ ಲಕ್ಷ್ಮಿ ಸಂತಸಗೊಳ್ಳುತ್ತಾಳೆ ನಿಜ. ಆದರೆ ಸೂರ್ಯಾಸ್ತದ ನಂತರ ಪೊರಕೆಯಿಂದ ಗುಡಿಸಿದರೆ ದಾರಿದ್ರ್ಯ ಆವರಿಸುತ್ತದೆಯಂತೆ.

ಮೊಸರು, ಮಜ್ಜಿಗೆಯನ್ನು ದಾನ ಮಾಡುವುದು ಉತ್ತಮ ಕೆಲಸವೇ. ಆದರೆ ಸಂಜೆಯ ಸಮಯದಲ್ಲಿ ಇವುಗಳನ್ನು ದಾನ ಮಾಡಿದರೆ ಬಡತನ ಆವರಿಸುತ್ತದೆಯಂತೆ.

ಕೈ ಗಡಿಯಾರವನ್ನು ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಶೇವಿಂಗ್ ಮಾಡಿ,ಉಗುರುಗಳನ್ನು ಮತ್ತು ಕೂದಲು ಕತ್ತರಿಸಿ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಲಕ್ಷ್ಮಿಯ ಅನುಗ್ರಹಕ್ಕೆ ಕಾರಣವಾಗುತ್ತದೆ ನಿಜ. ಆದರೆ ಇವುಗಳನ್ನು ಮಂಗಳವಾರ, ಗುರುವಾರ ಮತ್ತು ಶನಿವಾರ ಈ ಕೆಲಸ ಮಾಡಿದರೆ ಲಕ್ಷ್ಮಿಯ ಕೋಪಕ್ಕೆ ಗುರಿಯಾಗುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...