Kannada Duniya

ಕಲಹವನ್ನು ಹೋಗಲಾಡಿಸಲು ಕೇಸರಿ ಮತ್ತು ನೀರಿನಿಂದ ಈ ಪರಿಹಾರಗಳನ್ನು ಮಾಡಿ…!

ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುವಂತೆ ಮಾಡಲು ವ್ಯಕ್ತಿ ಪ್ರತಿದಿನ ದೇವರ ಪೂಜೆಯನ್ನು ಮಾಡುತ್ತಾನೆ. ಆದರೆ ಕೌಟುಂಬಿಕ ಕಲಹಗಳು ವ್ಯಕ್ತಿ ಸಂತೋಷ ಮತ್ತು ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಹಾಗಾಗಿ ಈ ಕೌಟುಂಬಿಕ ಸಮಸ್ಯೆಯನ್ನು ಹೋಗಲಾಡಿಸಲು ಈ ಸಲಹೆ ಪಾಲಿಸಿ.

ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿದ್ದರೆ ಒಂದು ಚಿಟಿಕೆ ಕುಂಕುಮವನ್ನು ನೀರಿಗೆ ಹಾಕಿ ಆ ನೀರಿನಿಂದ ಸ್ನಾನ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಹಾಗೇ ಕೇಸರಿ ಹಾಲು ಕುಡಿಯುವುದರಿಂದ ಮಾನಸಿಕ ನೆಮ್ಮದಿ ಇರುತ್ತದೆ.

ಈ ನೈಸರ್ಗಿಕ ಏರ್ ಪ್ಯೂರಿಫೈಯರ್ ಅನ್ನು ಮನೆಯಲ್ಲಿ ಇಟ್ಟುಕೊಂಡರೆ ಮಾಲಿನ್ಯ ನಿವಾರಣೆಯಾಗುತ್ತದೆ

ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಹನುಮಂತನ ಮುಂದೆ ದೀಪವನ್ನು ಹಚ್ಚುವುದರಿಂದ ಮನಸ್ತಾಪ ದೂರವಾಗುತ್ತದೆ. ಇದನ್ನು ಸತತವಾಗಿ 7 ಮಂಗಳವಾರ ಮಾಡಬೇಕು.

ಹಾಗೇ ಮನೆಯಲ್ಲಿನ ತೊಂದರೆಗಳನ್ನು ನಿವಾರಿಸಲು ರಾತ್ರಿ ಮಲಗುವಾಗ ಕರ್ಪೂರವನ್ನು ಹಸುವಿನ ತುಪ್ಪದಲ್ಲಿ ಅದ್ದಿ ಸುಡಬೇಕು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಅಲ್ಲದೇ ಮನೆಯನ್ನು ಒರೆಸುವಾಗ ನೀರಿಗೆ ಉಪ್ಪನ್ನು ಸೇರಿಸಿಕೊಳ್ಳಿ. ಇದರಿಂದ ಮನೆಯಲ್ಲಿರುವ ನಕರಾತ್ಮಕತೆ ದೂರವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...