ಹಿಂದೂ ಧರ್ಮದಲ್ಲಿ ದೇವರ ಪೂಜೆಯಲ್ಲಿ ಕರ್ಪೂರವನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಇದರ ಸುಗಂಧವು ನಕರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮತ್ತು ಧನಾತ್ಮಕ ಶಕ್ತಿಯನ್ನು ನೆಲೆಸುವಂತೆ ಮಾಡುತ್ತದೆ. ಹಾಗಾಗಿ ಕರ್ಪೂರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗಾಗಿ ಇದನ್ನು ಬಳಸಿಕೊಂಡು ನಮ್ಮ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು.
ಹಣದ ಕೊರತೆಯನ್ನು ನಿವಾರಿಸಲು ಪ್ರತಿರಾತ್ರಿ ಸದಸ್ಯರು ಆಹಾರ ಸೇವಿಸಿದ ನಂತರ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಬೆಳ್ಳಿಯ ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಟ್ಟು ಹಾಕಿ. ಹಾಗೇ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತುಪ್ಪದಲ್ಲಿ ಕರ್ಪೂರವನ್ನು ಅದ್ದಿ ಅದನ್ನು ಸುಟ್ಟು ಹಾಕಿ.
ಮಳೆಗಾಲದಲ್ಲಿ ಪ್ರವಾಸಕ್ಕೆ ಹೋಗುವವರಿಗೆ ಇಲ್ಲಿದೆ ಸುಂದರವಾದ ಸ್ಥಳಗಳು…!
ದಾಂಪತ್ಯ ಜೀವನದಲ್ಲಿ ಸಂತೋಷ ನೆಲೆಸಲು ಮಲಗುವ ಕೋಣೆಯನ್ನು ಸ್ವಚ್ಛಗೊಳಿಸಿ ನಂತರ ಕರ್ಪೂರವನ್ನು ಸುಟ್ಟು ಅದನ್ನು ಪ್ರತಿ ಮೂಲೆಗೂ ತಿರುಗಿಸಿ. ಇದರಿಂದ ನಕರಾತ್ಮಕ ಶಕ್ತಿ ದೂರವಾಗುತ್ತದೆ. ಹಾಗೇ ಗಂಡ ಹೆಂಡತಿಯ ನಡುವೆ ಜಗಳವಾಗುತ್ತಿದ್ದರೆ ರಾತ್ರಿ ದಿಂಬಿನ ಕೆಳಗೆ ಕರ್ಪೂರವನ್ನು ಇಟ್ಟು ಬೆಳಿಗ್ಗೆ ಏಕಾಂಗಿಯಾಗಿ ಸುಡಬೇಕು.