Kannada Duniya

ಈ ರಾಶಿಯಲ್ಲಿ ಜನಿಸಿದವರ ಮೇಲೆ ಕೇತುವಿನ ನೆರಳು ಬೀಳುತ್ತದೆಯಂತೆ…!

ನವಗ್ರಹಗಳಲ್ಲಿ ಕೇತುಗ್ರಹ ಕೂಡ ಒಂದು. ಇದು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಕೇತು ಬಹಳ ಕ್ರೂರ ಗ್ರಹವಾಗಿದೆ. ಜಾತಕದಲ್ಲಿ ಕೇತು ಬಲವಾಗಿದ್ದರೆ ಉತ್ತಮ ಫಲಿತಾಂಶ ದೊರೆಯುತ್ತದೆ, ದುರ್ಬಲನಾಗಿದ್ದರೆ ಅಶುಭ ಫಲಿತಾಂಶ ನೀಡುತ್ತದೆ. ಹಾಗಾಗಿ ಈ ರಾಶಿಯಲ್ಲಿ ಜನಿಸಿದವರ ಮೇಲೆ ಕೇತುವಿನ ನೆರಳು ಬೀಳುತ್ತದೆಯಂತೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿ ಎರಡು ಮತ್ತು ಎಂಟನೇ ಮನೆಯಲ್ಲಿ ಕೇತು ಇದ್ದರೆ ಅದು ಶುಭ ಫಲಿತಾಂಶವನ್ನು ನೀಡುತ್ತದೆ. ಹಾಗೇ ಜಾತಕದಲ್ಲಿ ಕೇತು ಮೂರು, ಐದನೇ, ಆರನೇ, ಒಂಬತ್ತನೇ ಮತ್ತು ಹನ್ನೆರಡನೇ ಮನೆಯಲ್ಲಿದ್ದರೆ ವ್ಯಕ್ತಿಯು ಉತ್ತಮ ಫಲಿತಾಂಶವನ್ನು ಪಡೆಯುತ್ತಾನೆ. ಒಂದು ವೇಳೇ ಕೇತು ಅಶುಭವಾಗಿದ್ದರೆ ಅಗೌರವ, ಅಪಘಾತ, ಅವಮಾನ, ಆತಂಕ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.

ಈ ವರ್ಷವಿಡೀ ಅಪಾರ ಹಣವನ್ನು ಪಡೆಯಲು ಈ ಪರಿಹಾರವನ್ನು ಮಾಡಿ

ಅಲ್ಲದೇ ಧನು ಮತ್ತು ಮಿಥುನ ರಾಶಿಯ ಮೇಲೆ ಅಶುಭ ಫಲಿತಾಂಶವನ್ನು ನೀಡುತ್ತಾನೆ. ಹಾಗೇ ಅಶ್ವಿನಿ, ಮಾಘ ಮತ್ತು ಮೂಲ ಈ ಮೂರು ರಾಶಿಯ ಅಧಿಪತಿಯಾದ ಕಾರಣ ಇವರ ಮೇಲೆ ಶುಭ ಫಲಿತಾಂಶವನ್ನು ನೀಡುತ್ತಾನೆ. ಇವರು ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...