ಜ್ಯೋತಿಷ್ಯಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾಗಿ ಕೆಲವು ಮರಗಳನ್ನು ಪೂಜಿಸುವುದರಿಂದ ಹಲವು ಪ್ರಯೋಜನಗಳನ್ನುಪಡೆಯಬಹುದು. ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಮನೆಯಲ್ಲಿ ನಾಗಕೇಸರ ಗಿಡವನ್ನು ನೆಡುವುದರಿಂದ ಮನುಷ್ಯನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆಯಂತೆ.
-ಶುಕ್ಲ ಪಕ್ಷದ ಶುಕ್ರವಾರದಂದು ನಾಗಕೇಸರ ಮತ್ತು ಜೇನುತುಪ್ಪವನ್ನು ಬೆಳ್ಳಿಯ ಪಟ್ಟಿಗೆಯಲ್ಲಿ ಮುಚ್ಚಿಡಿ. ಇದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ.
-ನಾಗಕೇಸರ , ಅರಿಶಿನ, ವೀಳ್ಯದೆಲೆ ಮತ್ತು ತಾಮ್ರದ ನಾಣ್ಯವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಶಿವನಿಗೆ ಅರ್ಪಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ.
ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಈ ಕ್ರಮಗಳನ್ನು ಅನುಸರಿಸಿ…!
-ಮನೆಯಲ್ಲಿ ವಾಸ್ತು ದೋಷವನ್ನು ನಿವಾರಿಸಲು ನಾಗಕೇಸರಿ ಮರದ ತುಂಡುಗಳನ್ನು ಹವನಕ್ಕೆ ಹಾಕಿ. ಇದರಿಂದ ಮನೆಯಲ್ಲಿ ಸಕರಾತ್ಮಕತೆ ನೆಲೆಸಿರುತ್ತದೆ.
=ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಲಾಭವಾಗಲು ಹಳದಿ ಬಟ್ಟೆಯಲ್ಲಿ ನಾಗಕೇಸರಿ ಹೂ ಮತ್ತು ಸಾಸಿವೆಯನ್ನು ಕಟ್ಟಿ ವ್ಯಾಪಾರದ ಸ್ಥಳದಲ್ಲಿಡಿ.