Kannada Duniya

ಈ ಒಂದು ಗಿಡ ಮನೆಯಲ್ಲಿ ನೆಟ್ಟರೆ ಯಾವತ್ತೂ ಹಣದ ಕೊರತೆ ಕಾಡಲ್ಲ…!

ಜ್ಯೋತಿಷ್ಯಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾಗಿ ಕೆಲವು ಮರಗಳನ್ನು ಪೂಜಿಸುವುದರಿಂದ ಹಲವು ಪ್ರಯೋಜನಗಳನ್ನುಪಡೆಯಬಹುದು. ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಮನೆಯಲ್ಲಿ ನಾಗಕೇಸರ ಗಿಡವನ್ನು ನೆಡುವುದರಿಂದ ಮನುಷ್ಯನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆಯಂತೆ.

-ಶುಕ್ಲ ಪಕ್ಷದ ಶುಕ್ರವಾರದಂದು ನಾಗಕೇಸರ ಮತ್ತು ಜೇನುತುಪ್ಪವನ್ನು ಬೆಳ್ಳಿಯ ಪಟ್ಟಿಗೆಯಲ್ಲಿ ಮುಚ್ಚಿಡಿ. ಇದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ.

-ನಾಗಕೇಸರ , ಅರಿಶಿನ, ವೀಳ್ಯದೆಲೆ ಮತ್ತು ತಾಮ್ರದ ನಾಣ್ಯವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಶಿವನಿಗೆ ಅರ್ಪಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ.

ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಈ ಕ್ರಮಗಳನ್ನು ಅನುಸರಿಸಿ…!

-ಮನೆಯಲ್ಲಿ ವಾಸ್ತು ದೋಷವನ್ನು ನಿವಾರಿಸಲು ನಾಗಕೇಸರಿ ಮರದ ತುಂಡುಗಳನ್ನು ಹವನಕ್ಕೆ ಹಾಕಿ. ಇದರಿಂದ ಮನೆಯಲ್ಲಿ ಸಕರಾತ್ಮಕತೆ ನೆಲೆಸಿರುತ್ತದೆ.

=ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಲಾಭವಾಗಲು ಹಳದಿ ಬಟ್ಟೆಯಲ್ಲಿ ನಾಗಕೇಸರಿ ಹೂ ಮತ್ತು ಸಾಸಿವೆಯನ್ನು ಕಟ್ಟಿ ವ್ಯಾಪಾರದ ಸ್ಥಳದಲ್ಲಿಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...