ಆಲಿವ್ ಎಲೆಗಳನ್ನು ಜಗಿಯುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಂತೆ. ಈ ಎಲೆಗಳಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆಯಂತೆ. ಇದು ಸಂಶೋಧನೆಯಿಂದ ಸಾಬೀತಾಗಿದೆ.
Plant based Food for Heart health:ಈ ಸಸ್ಯ ಆಧಾರಿತ ಆಹಾರ ಸೇವಿಸಿದರೆ ಹೃದ್ರೋಗದಿಂದ ಸುರಕ್ಷಿತವಾಗಿರಬಹುದಂತೆ…!
ತುಳಸಿ ಎಲೆಗಳು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆಯಂತೆ. ಹಾಗಾಗಿ ಮಧುಮೇಹಿಗಳಿಗೆ ಈ ಎಲೆಗಳು ಪ್ರಯೋಜನಕಾರಿಯಾಗಿದೆ.
ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ತುಳಸಿ ಎಲೆಗಳನ್ನು ಜಿಗಿಯಬಹುದು.
ಪೇರಳೆ ಎಲೆಗಳು ಕೂಡ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಹಾಗಾಗಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಪೇರಳೆ ಎಲೆಗಳ ಕಷಾಯ ತಯಾರಿಸಿ ಕುಡಿಯಿರಿ. ಇಲ್ಲವಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ಜಗಿದು ತಿಂದು ಬೆಚ್ಚಗಿರುವ ನೀರನ್ನು ಕುಡಿಯಿರಿ.