ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಹೃದಯಾಘಾತದ ಸಮಸ್ಯೆ ಕಂಡುಬರುತ್ತದೆ.ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹೃದಯದ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾದಾಗ ರಕ್ತನಾಳಗಳು ಮುಚ್ಚಿಹೋಗುತ್ತದೆ. ಇದರಿಂದ ರಕ್ತ ಸರಿಯಾಗಿ ಸಂಚಾರವಾಗದೆ ಹೃದಯಕ್ಕೆ ಹಾನಿಯಾಗಿ ಹೃದಯಾಘಾತ ಸಂಭವಿಸುತ್ತದೆ. ಹಾಗಾಗಿ ಈ ರಕ್ತನಾಳು ತೆರೆದುಕೊಳ್ಳಲು ಈ ಗಿಡಮೂಲಿಕೆಗಳನ್ನು ಬಳಸಿ.
ಬೆಳ್ಳುಳ್ಳಿ : ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಅಪಧಮನಿಗಳಲ್ಲಿ ಉರಿಯೂತವನ್ನು ನಿವಾರಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ನಿವಾರಿಸುತ್ತದೆ.
ಅರಿಶಿನ : ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕರ್ಕ್ಯುಮಿನ್ ಅಂಶವಿದ್ದು, ಇದು ಅಪಧಮನಿಗಳಲ್ಲಿ ಸಂಗ್ರಹವಾದ ಪ್ಲೇಕ್ ಅನ್ನು ನಿವಾರಿಸುತ್ತದೆ.
ಅಶ್ವಗಂಧ : ಇದು ಹೃದಯಕ್ಕೆ ರಕ್ಷಣೆಯನ್ನು ನೀಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಾಡುವುದಿಲ್ಲ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ. ಅಪಧಮನಿಯ ರಕ್ತನಾಳಗಳನ್ನು ತೆರವುಗೊಳಿಸುತ್ತದೆ.
ಶುಂಠಿ : ಇದರಲ್ಲಿ ಉರಿಯೂತ ಗುಣಲಕ್ಷಣಗಳಿದ್ದು, ಇದು ಅಪಧಮನಿಗಳಲ್ಲಿನ ಉರಿಯೂತ ಮತ್ತು ಹೃದಯದ ಒತ್ತಡವನ್ನು ಕಡಿಮೆ ಮಾಡುತ್ತದೆ.