ಬುಧವಾರ ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಈತ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ನಿವಾರಿಸುತ್ತಾನಂತೆ. ಹಾಗಾಗಿ ಯಾವುದೇ ಶುಭ ಕಾರ್ಯವನ್ನುಮಾಡುವಾಗ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಹಾಗಾಗಿ ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಬುಧವಾರದಂದು ಈ ಪರಿಹಾರ ಮಾಡಿ.
ನಿಮ್ಮ ಜಾತಕದಲ್ಲಿ ಬುಧನ ಸ್ಥಾನ ಕೆಟ್ಟದಾಗಿದ್ದರೆ ಬುಧವಾರ ಗಣೇಶನ್ನು ಕುರಿತು ಪೂಜೆ ಮಾಡಿ, ಈ ದಿನ ಗಣೇಶನ ಅಥರ್ವಶಿರ್ಷವನ್ನು ಪಠಿಸಿ. ಹಾಗೇ ಗಣೇಶನಿಗೆ ಮೋದಕವನ್ನು ಅರ್ಪಿಸಿ. ಇದರಿಂದ ಬುಧನ ಅನುಗ್ರಹ ದೊರೆಯುತ್ತದೆ. ಹಾಗೇ ಬುಧವಾರದಂದು ಗಣೇಶನಿಗೆ 21 ಅಥವಾ 42 ಗರಿಕೆ ಹುಲ್ಲನ್ನು ಅರ್ಪಿಸಿ. ಇದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆಯಂತೆ.
ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿದೇವಿಗೆ ಗುಲಾಬಿ ಹೂವಿನ ಹಾರವನ್ನು ಅರ್ಪಿಸಿ ಹಾಗೇ ಖೀರ್ ಅನ್ನು ನೈವೇದ್ಯವಾಗಿ ನೀಡಿ. ಇದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆಯಂತೆ.