Kannada Duniya

ಕಷ್ಟ ಬಂದಾಗ ಯಾವುದೇ ಕಾರಣಕ್ಕೂ ಇವುಗಳನ್ನು ಮರೆಯದಿರಿ!

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಕಷ್ಟದ ಸಮಯ ಬಂದೇ ಬರುತ್ತದೆ. ಅಂಥ ಸಂದರ್ಭವನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಅರ್ಥಶಾಸ್ತ್ರಜ್ಞ ಚಾಣಕ್ಯ ಕೆಲವು ಸಲಹೆಗಳನ್ನು ನೀಡಿದ್ದಾನೆ.

ಬಿಕ್ಕಟ್ಟಿನ ಸಮಯದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಅಂಥ ಸಮಯದಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಹಾಗಾಗಿ ಈ ಕುರಿತು ಎಚ್ಚರಿಕೆ ಹೊಂದಿರಬೇಕು.

ಯಾವುದೇ ಇಕ್ಕಟ್ಟಿನ ಸಂದರ್ಭವಾಗಿರಲಿ, ತನ್ನ ಕುಟುಂಬದ ಜವಾಬ್ದಾರಿಯನ್ನು ಪೂರೈಸುವುದು ಆತನ ಮೊದಲ ಕರ್ತವ್ಯ ಎಂಬುದನ್ನು ಮರೆಯಬಾರದು. ನಿಮ್ಮ ಕುಟುಂಬಕ್ಕೆ ವಿಶೇಷ ರಕ್ಷಣೆ ಕೊಡುವವರು ನೀವೇ ಆಗಿರಬೇಕು.

ಸಂದರ್ಭ ಯಾವುದೇ ಇರಬಹುದು, ಆದರೆ ಆರೋಗ್ಯ ನಿಮ್ಮ ಅತಿ ದೊಡ್ಡ ಆಸ್ತಿ ಎಂಬುದು ನೆನಪಿನಲ್ಲಿ ಇರಬೇಕು. ಒತ್ತಡ, ಆತಂಕದ ಜೊತೆಗೆ ಆಹಾರ ಸೇವನೆಯನ್ನೂ ಕೈಬಿಟ್ಟಾಗ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಶ್ಚಿತ. ಹಾಗಾಗಿ ಈ ಕುರಿತು ಎಚ್ಚರದಿಂದ ಇರಬೇಕು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...