Kannada Duniya

ಈ ಪದಾರ್ಥಗಳನ್ನು ಬಳಸಿ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಬಹುದು….!

ಭಾರತದ ಮಸಾಲೆ ಪದಾರ್ಥಗಳು ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಕೊರೊನಾ ಕಷಾಯ ಮಾಡಲು ಕೂಡ ಇವುಗಳನ್ನು ಬಳಸುತ್ತಾರೆ. ಯಾಕೆಂದರೆ ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ ಈ ಮಸಾಲೆ ಪದಾರ್ಥಗಳನ್ನು ಬಳಸಿ ನಮ್ಮ ಅದೃಷ್ಟವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.

 

ಲವಂಗ ಮತ್ತು ಕರಿಮೆಣಸು : ಇವೆರಡು ಶನಿ ಪ್ರಾಬಲ್ಯದ ಮಸಾಲೆಗಳಾಗಿ ಪರಿಗಣಿಸಲಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ಲವಂಗ ಮತ್ತು ಕರಿಮೆಣಸು ಹಾಕಿ ದೀಪ ಬೆಳಗಿದರೆ ಶನಿ ಗ್ರಹದ ದುಷ್ಪರಿಣಾಮಗಳನ್ನು ನಿವಾರಿಸಬಹುದು.

ಇಂಗು : ಇಂಗು ಬುಧ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಊಟದಲ್ಲಿ ಇಂಗನ್ನು ಸೇರಿಸಿ ಸೇವಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಬುಧ ದೋಷ ನಿವಾರಣೆಯಾಗುತ್ತದೆ.

ಜೀರಿಗೆ : ಜೀರಿಗೆ ರಾಹು ಮತ್ತು ಕೇತುವಿಗೆ ಸಂಬಂಧಿಸಿದೆ ಎಂದು ನಂಬಲಾಗುತ್ತದೆ. ರಾಹು ಮತ್ತು ಕೇತು ಕೆಟ್ಟ ಸ್ಥಿತಿಯಲ್ಲಿದ್ದಾಗ ವ್ಯಕ್ತಿ ಜೀರಿಗೆಯನ್ನು ಶನಿವಾರ ದಾನ ಮಾಡಬೇಕು. ಇದರಿಂದ ರಾಹು-ಕೇತು ಸ್ಥಿತಿ ಸುಧಾರಿಸುತ್ತದೆ.

ಸೊಂಪು : ಕಲ್ಲುಸಕ್ಕರೆ ಜೊತೆಗೆ ಸೊಂಪನ್ನು ಬೆರೆಸಿ ತಿಂದರೆ ಶುಕ್ರ ಗ್ರಹ ಬಲಗೊಳ್ಳುತ್ತದೆ. ಹಾಗೇ ನಿಮ್ಮ ಜಾತಕದಲ್ಲಿ ಮಂಗಳಗ್ರಹ ದುರ್ಬಲವಾಗಿದ್ದರೆ ಬೆಲ್ಲದಲ್ಲಿ ಸೊಂಪನ್ನಿ ಬೆರೆಸಿ ಸೇವಿಸಿ.

ಅರಿಶಿನ : ಅರಿಶಿನ ಗುರು ಗ್ರಹಕ್ಕೆ ಸಂಬಂಧಿಸಿದೆ. ಗುರು ಗ್ರಹ ದುರ್ಬಲವಾಗಿರುವ ವ್ಯಕ್ತಿ ತಮ್ಮ ಜೇಬಿನಲ್ಲಿ ಕರವಸ್ತ್ರದಲ್ಲಿ ಚಿಟಿಕೆ ಅರಿಶಿನವನ್ನು ಇಟ್ಟುಕೊಳ್ಳಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...