ಆರೋಗ್ಯವೇ ಸಂಪತ್ತು. ನಾವು ಆರೋಗ್ಯವಾಗಿದ್ದರೆ ಹಣದ ಕೊರತೆ ಎಂದಿಗೂ ಕಾಡಲ್ಲ. ಹಾಗಾಗಿ ನಾವು ಆರೋಗ್ಯವಾಗಿದ್ದರೆ ಕಷ್ಟದ ಸಮಯಗಳನ್ನು ಎದುರಿಸಬಹುದು. ಹಾಗಾಗಿ ಚಾಣಕ್ಯರು ಆರೋಗ್ಯದ ಬಗ್ಗೆ ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿಡಲು ಏನು ಮಾಡಬೇಕೆಂದು ತಿಳಿಸಿದ್ದಾರೆ.
-ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವಂತೆ ಆಚಾರ್ಯರು ತಿಳಿಸಿದ್ದಾರೆ. ಹಾಗೇ ನೀರು ಒಂದು ಔಷಧಿ ಇದ್ದಂತೆ. ಹಾಗಾಗಿ ಅದನ್ನು ಸರಿಯಾಗಿ ಕುಡಿಯಬೇಕು. ಆಹಾರ ಸೇವಿಸಿದ ಅರ್ಧ ಗಂಟೆಯ ಬಳಿಕ ನೀರು ಕುಡಿದರೆ ಉತ್ತಮವೆಂದು ಚಾಣಕ್ಯರು ತಿಳಿಸಿದ್ದಾರೆ.
-ನಾವು ಸೇವಿಸುವ ಆಹಾರ ಕೂಡ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುತ್ತದೆ.ಹಾಗಾಗಿ ಯಾವಾಗಲೂ ಸಾತ್ವಿಕ ಆಹಾರವನ್ನು ಸೇವಿಸಬೇಕು. ಇದರಿಂದ ನಿಮ್ಮ ಆಲೋಚನೆಗಳು ಶುದ್ಧವಾಗಿರುತ್ತದೆ. ಮಾಂಸಹಾರದಿಂದ ಅಸ್ವಸ್ಥರಾಗುತ್ತೀರಿ ಎಂದು ತಿಳಿಸಿದ್ದಾರೆ.
-ದುರಾಸೆಯು ವ್ಯಕ್ತಿಯನ್ನು ರೋಗಿಯನ್ನಾಗಿ ಮಾಡುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ. ಇದು ಒಂದು ಭಯಾನಕ ಕಾಯಿಲೆಯಾಗಿದೆ. ಇದರಿಂದ ವ್ಯಕ್ತಿಯ ಮಾನಸಿಕ ಸ್ಥಿತಿ ಕ್ರಮೇಣ ದುರ್ಬಲವಾಗುತ್ತದೆ.
-ಯುವಕರು ಲೈಂಗಿಕತೆಯಿಂದ ದೂರವಿರಬೇಕು. ಇದು ಅವನನ್ನು ಮುಂದೆ ಸಾಗದಂತೆ ತಡೆಯುತ್ತದೆ. ಅಲ್ಲದೇ ಇದರಿಂದ ಅವರು ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ.
ಚಾಣಕ್ಯ ನೀತಿಯ ಪ್ರಕಾರ ಮನೆಯಲ್ಲಿ ಇಂತಹ ಜನರಿದ್ದರೆ ಮನೆಯಲ್ಲಿ ಅದೃಷ್ಟ ನೆಲೆಸಿರುತ್ತದೆಯಂತೆ
-ವಾರದಲ್ಲಿ ಒಮ್ಮೆ ದೇಹಕ್ಕೆ ಎಣ್ಣೆ ಮಸಾಜ್ ಮಾಡಬೇಕು. ಇದರಿಂದ ದೇಹದ ರಂಧ್ರಗಳು ತೆರೆದುಕೊಂಡು ಕೊಳೆ ಕೊಳಕು ಹೊರಗೆ ಬರುತ್ತದೆ. ದೇಹ ಸ್ವಚ್ಛವಾಗಿ, ಆರೋಗ್ಯವಾಗಿರುತ್ತದೆಯಂತೆ.