ಆಚಾರ್ಯ ಚಾಣಕ್ಯರು ಇತಿಹಾಸದ ಒಬ್ಬ ಶ್ರೇಷ್ಠ ವಿದ್ವಾಂಸ. ಇವರು ಜೀವನದ ಬಗ್ಗೆ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಹಾಗಾಗಿ ಅವರು ತಮ್ಮ ಅನುಭವಗಳನ್ನು ನೀತಿ ಪುಸ್ತಕದಲ್ಲಿ ಬರೆದಿದ್ದಾರೆ. ಅದರಲ್ಲಿ ತಿಳಿಸಿದಂತೆ ನೀವು ಜೀವನದಲ್ಲಿ ಏಳಿಗೆ ಹೊಂದಲು ಚಾಣಕ್ಯರ ಈ ನೀತಿಗಳನ್ನು ಅನುಸರಿಸಿ.
ನೀವು ಜೀವನದಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿ, ಬೇರೆಯವರ ಮಾತನ್ನು ಹೆಚ್ಚು ಆಲಿಸಿ. ಇದರಿಂದ ನೀವು ಕೆಲವು ವಿಚಾರಗಳ ಬಗ್ಗೆ ಜ್ಞಾನವನ್ನು ಪಡೆಯಬಹುದು. ಅಲ್ಲದೇ ಹೆಚ್ಚಿನವರು ನಿಮ್ಮ ಸ್ನೇಹಿತರಾಗುತ್ತಾರೆ. ನಿಮಗೆ ಶತ್ರುಗಳು ಇರುವುದಿಲ್ಲ.
Surya’s Blessing:ಫೆಬ್ರವರಿ 13 ರಿಂದ ಸೂರ್ಯ ದೇವನ ಅನುಗ್ರಹದಿಂದ ಈ ರಾಶಿಯವರ ಅದೃಷ್ಟ ಬೆಳಗುತ್ತದೆ..!
ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದರಿಂದ ನೀವು ನಿಮ್ಮ ಗುರಿಯನ್ನು ತಲುಪಬಹುದು.
ಯಾವಾಗಲೂ ಕಠಿಣ ಪರಿಶ್ರಮವನ್ನು ಹಾಕಿ. ಬೆಳಗ್ಗೆ ಬೇಗ ಎದ್ದೇಳಿ. ಕಷ್ಟಪಟ್ಟು ಕೆಲಸ ಮಾಡಿ. ಇದರಿಂದ ನೀವು ಹಣ ಸಂಪಾದಿಸಬಹುದು ಮತ್ತು ಜೀವನದಲ್ಲಿ ಉದ್ಧಾರವಾಗಬಹುದು ಎಂದು ಚಾಣಕ್ಯರು ತಿಳಿಸಿದ್ದಾರೆ.
ನಿಮ್ಮ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳಿ. ನಿಮ್ಮ ಭಾರವನ್ನು ನೀವೇ ಹೊತ್ತುಕೊಳ್ಳಿ. ನಿಮ್ಮ ಅಗತ್ಯತೆಗಳನ್ನು ಪೂರೈಸಲು ನೀವೆ ಕಷ್ಟಪಟ್ಟು ಕೆಲಸ ಮಾಡಿ ಹಣ ಗಳಿಸಿ. ಇದರಿಂದ ನೀವು ಜೀವನದಲ್ಲಿ ಏಳಿಗೆ ಕಾಣುತ್ತೀರಿ.