Kannada Duniya

ಮಹಾಲಯ ಅಮಾವಾಸ್ಯೆಯಂದು ಈ ರಾಶಿಯವರ ಅದೃಷ್ಟವೇ ಬದಲಾಗಲಿದೆಯಂತೆ!

ಮಹಾಲಯ ಅಮಾವಾಸ್ಯೆ ಎಂದರೆ ಬಹಳ ವಿಶೇಷವಾದದ್ದು. ಈ ಬಾರಿ ಮಹಾಲಯ ಅಮಾವಾಸ್ಯೆ ಅಕ್ಟೋಬರ್  14 ರಂದು ಬಂದಿದೆ.ಇದಲ್ಲದೇ, ಈ ವರ್ಷದ ಎರಡನೇ ಸೂರ್ಯಗ್ರಹಣ ಕೂಡ ಅಕ್ಟೋಬರ್ 14 ರಂದು ಸಂಭವಿಸಲಿದೆ.ವಿಶೇಷವಾಗಿ ಈ 3 ರಾಶಿಯವರು ಸೂರ್ಯಗ್ರಹಣದಿಂದಾಗಿ ಅದೃಷ್ಟಶಾಲಿಗಳಾಗುತ್ತಾರಂತೆ.ಆ ರಾಶಿಗಳು ಯಾವುದು ಎಂಬುದನ್ನು ಇಲ್ಲಿ ತಿಳಿಯಿರಿ.

ಈ ಮಹಾಲಯ ಅಮಾವಾಸ್ಯೆಯು ಸಿಂಹ ರಾಶಿಯವರಿಗೆ ಅನೇಕ ಲಾಭಗಳನ್ನು ತರಲಿದೆಯಂತೆ.ಸಿಂಹ ರಾಶಿಯ ಎರಡನೆ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆಯಂತೆ. ಹಾಗಾಗಿ ಇವರ ಬದುಕಿನಲ್ಲಿ ಆರ್ಥಿಕ ಲಾಭದ ಜೊತೆ, ಸಂತೋಷ, ಸಮೃದ್ಧಿ ತುಂಬಲಿದೆಯಂತೆ.

ಇನ್ನು ಮಿಥುನ ರಾಶಿಯ 4ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಲಿದ್ದು ಈ ಗ್ರಹಣದಿಂದ ಮಿಥುನ ರಾಶಿಯವರು ಸೂರ್ಯನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಇವರ ಕಠಿಣ ಪರಿಶ್ರಮ ಫಲ ನೀಡಲಿದೆಯಂತೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರಂತೆ. ಹಾಗೇ ಉದ್ಯೋಗಿಗಳಿಗೆ ಬಡ್ತಿ ಸಿಗುವ ಅವಕಾಶವಿದೆಯಂತೆ.

ನಿಮ್ಮ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿದೆಯಾ….? ಇದನ್ನು ನಿವಾರಿಸುವ ವಾಸ್ತು ಟಿಪ್ಸ್ ಇಲ್ಲಿದೆ ನೋಡಿ….!

ಇನ್ನು ಈ ಸರ್ವಪಿತೃ ಅಮಾವಾಸ್ಯೆ ತುಲಾ ರಾಶಿಯವರಿಗೆ ಉತ್ತಮ ಲಾಭ ತರಲಿದೆಯಂತೆ. ಸಂಪತ್ತಿನ ಜೊತೆಗೆ ಆರೋಗ್ಯವು ಕೂಡ ಉತ್ತಮವಾಗಲಿದೆಯಂತೆ.ಇನ್ನು ತುಲಾರಾಶಿಯ 12ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸುವುದರಿಂದ ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆಯಂತೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...