ಎಲ್ಲರಿಗೂ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಹಾಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಒಂದೊಂದು ಸಮಸ್ಯೆಗೂ ಒಂದೊಂದು ಪರಿಹಾರವನ್ನು ತಿಳಿಸಲಾಗಿದೆ. ಅದರಂತೆ ನಿಮ್ಮ ಹಣದ ಸಮಸ್ಯೆಯನ್ನು ನಿವಾರಿಸಿ ನಿಮ್ಮ ಬಳಿ ಸಂಪತ್ತು ಹೆಚ್ಚಾಗಲು ಸಕ್ಕರೆಯಿಂದ ಈ ಪರಿಹಾರ ಮಾಡಿ.
-ವ್ಯಕ್ತಿಗೆ ಜೀವನದಲ್ಲಿ ಯಶಸ್ಸು ಮತ್ತು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಿಗಲು ಎಲ್ಲಾ ಗ್ರಹ ದೋಷವನ್ನು ನಿವಾರಿಸಬೇಕು. ಅದಕ್ಕಾಗಿ ಸೂರ್ಯನಿಗೆ ಸಕ್ಕರೆ ಮಿಶ್ರಿತ ನೀರನ್ನು ಅರ್ಪಿಸಿ. ಇದರಿಂದ ಗ್ರಹದೋಷ ದೂರವಾಗಿ ಸಂಪತ್ತು ಹೆಚ್ಚಾಗುತ್ತದೆ.
– ಹಿಟ್ಟಿಗೆ ಸಕ್ಕರೆ ಮಿಕ್ಸ್ ಮಾಡಿ ಕಾಗೆಗಳಿಗೆ ಆಹಾರವಾಗಿ ನೀಡಿದರೆ ಇದರಿಂದ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು ಮತ್ತು ಸಮಸ್ಯೆ ಕಡಿಮೆಯಾಗುತ್ತದೆ. ಹಾಗೇ ಇರುವೆಗಳಿಗೆ ಸಕ್ಕರೆ ಹಾಕಿದರೆ ಶನಿ ದೋಷ ನಿವಾರಣೆಯಾಗುತ್ತದೆ
ಮನೆಯ ಪೂರ್ವ ದಿಕ್ಕಿನಲ್ಲಿ ಏನು ಇಟ್ಟರೆ ಶುಭ….?
-ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಎದುರಾದರೆ ನಿಯಮಿತವಾಗಿ ತಾಮ್ರದ ಲೋಟದಲ್ಲಿ ಸಕ್ಕರೆ ಮತ್ತು ನೀರನ್ನು ಬೆರೆಸಿ ಸೇವಿಸಿ. ಹಾಗೇ ಹೊರಗಡೆ ಹೋಗುವಾಗ ತಾಮ್ರದ ಪಾತ್ರೆಯಲ್ಲಿ ಸಕ್ಕರೆ ನೀರನ್ನು ಕುಡಿಯಿರಿ.